ಕೊಲ್ಕೊತ್ತಾ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಡಿಆರ್ ಎಸ್ ಪದ್ಧತಿ ಅಳವಡಿಸಲು ಒಪ್ಪಿದ ಬಿಸಿಸಿಐ ನಿರ್ಧಾರಕ್ಕೆ ಮಾಜಿ ನಾಯಕರಾದ ಸೌರವ್ ಗಂಗೂಲಿ, ಮೊಹಮ್ಮದ್ ಅಜರುದ್ದೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಡಿಆರ್ ಎಸ್ ತುಂಬಾ ಸುಧಾರಿಸಿದೆ. ಆಟಗಾರರು, ಅಂಪೈರುಗಳು ಮತ್ತು ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತೃಪ್ತಿಯಾದರೆ, ಈ ವ್ಯವಸ್ಥೆಅಳವಡಿಸಲು ಯಾವುದೇ ತೊಂದರೆಯಿಲ್ಲ” ಎಂದು ಗಂಗೂಲಿ ಹೇಳಿದ್ದಾರೆ.
“ನಾನು ಎರಡು ಮೂರು ವರ್ಷಗಳಿಂದ ಇದನ್ನು ಹೇಳುತ್ತಲೇ ಬಂದಿದ್ದೇನೆ. ಇದೊಂದು ಉತ್ತಮ ಐಡಿಯಾ. ಡಿಆರ್ ಎಸ್ ಇಲ್ಲದ ಕಾರಣಕ್ಕೆ ಭಾರತ ವಿದೇಶಿ ನೆಲದಲ್ಲಿ ಕೆಲವು ರೋಚಕ ಪಂದ್ಯಗಳನ್ನು ಸೋತಿದೆ” ಎಂದು ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ