Select Your Language

Notifications

webdunia
webdunia
webdunia
webdunia

ಕೊಟ್ಟ ಮಾತು ಉಳಿಸಿಕೊಂಡ ಶಿಖರ್ ಧವನ್

ಕೊಟ್ಟ ಮಾತು ಉಳಿಸಿಕೊಂಡ ಶಿಖರ್ ಧವನ್
London , ಸೋಮವಾರ, 12 ಜೂನ್ 2017 (08:24 IST)
ಲಂಡನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧ ಆಘಾತಕಾರಿಯಾಗಿ ಸೋತ ಮೇಲೆ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮುಂದಿನ ಪಂದ್ಯದಲ್ಲಿ ವೈವಿದ್ಯ ರಣತಂತ್ರದೊಂದಿಗೆ ಕಣಕ್ಕಿಳಿದು ಗೆದ್ದು ತೋರಿಸುತ್ತೇವೆ ಎಂದು ಭರವಸೆ ನೀಡಿದ್ದರು.

 
ಅದನ್ನು ಅವರು ಉಳಿಸಿಕೊಂಡಿದ್ದಾರೆ. ಸ್ವತಃ ತಾವೇ ನಿಂತು ತಂಡವನ್ನು ದಡ ಸೇರಿಸುವ ಕೆಲಸ ಮಾಡಿದ್ದಾರೆ. ಇದರಿಂದಾಗಿ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ನಾಲ್ಕನೇ ಬಾರಿಗೆ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆದ್ದು ಮೆರೆದಿದೆ. ನಿನ್ನೆ ನಡೆದ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ.

192 ರನ್ ಗಳ ಅಲ್ಪ ಮೊತ್ತ ಬೆಂಬತ್ತಿದ ಭಾರತಕ್ಕೆ ರೋಹಿತ್ ಶರ್ಮಾ ಬಹುಬೇಗನೇ ಔಟಾಗುವ ಮೂಲಕ ಆಘಾತ ನೀಡಿದರು. ಆದರೆ ನಂತರ ಬಂದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ತಂಡವನ್ನು ಗೆಲುವಿನಂಚಿಗೆ ತಲುಪಿಸಿದರು. ಆದರೆ ಅಷ್ಟರಲ್ಲಿ 78 ರನ್ ಗಳಿಸಿದ್ದ ಧವನ್ ಔಟಾದರು.

ಹಾಗಿದ್ದರೂ ಭಾರತಕ್ಕೆ ಹೆಚ್ಚಿನ ಆಘಾತವಾಗಲಿಲ್ಲ. ಆರಂಭದಲ್ಲಿ ಕೊಂಚ ತಿಣುಕಾಡಿದರೂ, ನಂತರ ಲಯಕ್ಕೆ ಮರಳಿದ ಕೊಹ್ಲಿ ತಮ್ಮ ಎಂದಿನ ಹೊಡೆತಗಳನ್ನು ಬಾರಿಸುವ ಮೂಲಕ ಮತ್ತೊಮ್ಮೆ ತಾನೊಬ್ಬ ಚೇಸಿಂಗ್ ವೀರ ಎಂದು ಸಾಬೀತು ಪಡಿಸಿದರು. ಕೊನೆಯಲ್ಲಿ ಬಂದ ಯುವರಾಜ್ ಸಿಂಗ್ ಗೆಲುವಿನ ಸಿಕ್ಸರ್ ಸಿಡಿಸಿದರು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಸಿದ ಹೆಬ್ಬುಲಿಗಳಂತೆ ದ.ಆಫ್ರಿಕನ್ನರ ಮೇಲೆರಗಿದ ಟೀಂ ಇಂಡಿಯಾ