ಏಪ್ರಿಲ್ 9ರಂದು ಶ್ರೀನಗರದ ಉಪಚುನಾವಣೆ ವೇಳೆ ಸಿಆರ್`ಪಿಎಫ್ ಯೋಧನೊಬ್ಬನಿಗೆ ಪ್ರತಿಭಟನಾಕಾರರಲ್ಲೊಬ್ಬ ಕಾಲಿನಿಂದ ಒದ್ದ ಬಗ್ಗೆ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಟ್ವಿಟ್ಟರ್`ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗೆ ಆಜಾದಿ ಬೇಕೋ ಅವರು ದೇಶ ಬಿಟ್ಟು ಹೋಗಿ ಎಂದು ಕಿಡಿ ಕಾರಿದ್ದಾರೆ.
ಯೋಧರ ಮೇಲೆ ಬೀಳುವ ಒಂದೊಂದು ಏಟಿಗೆ 100 ಜಿಹಾದಿಗಳ ಹೆಣ ಬೀಳಬೇಕು ಎಂದು ಗೌತಮ್ ಗಂಭೀರ್ ಕಿಡಿ ಕಾರಿದ್ದಾರೆ. ಗಂಭೀರ್ ಟ್ವೀಟ್`ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್, ಯೋಧರ ಮೆಲಿನ ಹಲ್ಲೆಯನ್ನ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.