ಮುಂಬೈ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ಗುರುವಾರದಿಂದ ಆರಂಭವಾಗಲಿದೆ. ಈ ಟೆಸ್ಟ್ ನಡೆಯುವ ಪಿಚ್ ಹೇಗಿರಬಹುದು ಎಂದು ಕ್ಯುರೇಟರ್ ರಮೇಶ್ ಮಮುಂಕರ್ ಬಯಲು ಮಾಡಿದ್ದಾರೆ.
ಈಗಾಗಲೇ ಪಿಚ್ ನಲ್ಲಿರುವ ಹುಲ್ಲು ಆದಷ್ಟು ತೆಗೆಯಲು ಪ್ರಾರಂಭಿಸಿದ್ದು, ಇದನ್ನು ಸಂಪೂರ್ಣವಾಗಿ ಟರ್ನಿಂಗ್ ವಿಕೆಟ್ ಆಗಿಸುವ ಉದ್ದೇಶ ಕ್ಯುರೇಟರ್ ಗಿದೆಯಂತೆ. “ಎರಡನೇ ದಿನದ ಅಂತ್ಯಕ್ಕೆ ಅಥವಾ ಮೂರನೇ ದಿನದಿಂದ ಇಲ್ಲಿ ಬಾಲ್ ತಿರುವು ಪಡೆಯಲಿದೆ. ಈಗ ಮಂಜು ಬೀಳುವುದು ಜಾಸ್ತಿಯಾಗಿರುವುದರಿಂದ ಪಿಚ್ ನಲ್ಲಿರುವ ಹುಲ್ಲು ಕೀಳಲಾಗುತ್ತಿದೆ” ಎಂದು ರಮೇಶ್ ಹೇಳಿದ್ದಾರೆ.
ಭಾರತ ಈಗಾಗಲೇ ಸರಣಿಯಲ್ಲಿ 2-0 ಯಿಂದ ಮುಂದಿದ್ದು, ಇಲ್ಲಿನ ಪಿಚ್ ಸ್ಪಿನ್ನರ್ ಗಳಿಗೆ ಸಹಕರಿಸಿದರೆ ಇಲ್ಲಿಯೇ ಸರಣಿ ಗೆಲ್ಲಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ