ಸಚಿನ್ ತೆಂಡೂಲ್ಕರ್ ನನಗೆ ಆದರ್ಶಪ್ರಾಯರಾಗಿದ್ದು, ಸಚಿನ್ ದೈನ್ಯತೆ ಮತ್ತು ಆಟದಲ್ಲಿ ಅವರ ಉತ್ಸಾಹ ತಮಗೆ ಮತ್ತು ಇತರರಿಗೆ ಸ್ಫೂರ್ತಿ ಎಂದು ಏಕದಿನ ನಾಯಕ ಧೋನಿ ಹೇಳಿದ್ದಾರೆ. ನಾವು ಬೆಳೆಯುತ್ತಿದ್ದಾಗ ಸಚಿನ್ ಆಟವನ್ನು ವೀಕ್ಷಿಸುತ್ತಿದ್ದೆವು. ಅವರು ನಮಗೆ ದೇವರ ರೀತಿ. ಅವರ ಸುತ್ತ ಅಂತಹ ಪ್ರಭೆ ಆವರಿಸಿದೆ ಎಂದು ಧೋನಿ ಹೇಳಿದರು.
ತಾವು ಕ್ರಿಕೆಟ್ ಆಡಲು ಆರಂಭಿಸಿದಾಗ ಅವರು ಹೇಗೆ ಪ್ರಕ್ರಿಯೆಯಲ್ಲಿ ನಂಬಿಕೆಯಿರಿಸಿದ್ದರೆಂಬುದನ್ನು ತಾವು ಕಂಡಿದ್ದಾಗಿ ಧೋನಿ ಹೇಳಿದರು. ಪ್ರತಿ ಬಾರಿ ಅವರು ಮೈದಾನಕ್ಕೆ ಬಂದಾಗಲೂ ಕ್ರಿಕೆಟ್ ಆಟಗಾರನಾಗಿ ಸುಧಾರಿಸಬೇಕೆಂಬ ಬಯಕೆ ಅವರಲ್ಲಿತ್ತು. ಅವರು ಆದರ್ಶ ವ್ಯಕ್ತಿಯೆಂದು ನಾನು ಭಾವಿಸಿ ಅದರಂತೆ ನಡೆದುಕೊಂಡೆವು ಎಂದು ಧೋನಿ ಹೇಳಿದ್ದಾರೆ.
ಅಮೆರಿಕನ್ ಬಜಾರ್ ವೆಬ್ ಪೋರ್ಟಲ್ನಲ್ಲಿ ಪೋಸ್ಟ್ ಮಾಡಿದ ಸಂಕ್ಷಿಪ್ತ ವಿಡಿಯೋನಲ್ಲಿ ಧೋನಿ ಮೇಲಿನಂತೆ ತಿಳಿಸಿದ್ದಾರೆ. ಧೋನಿ ಅವರ ಜತೆ ಜಾರ್ಖಂಡ್ ಮಾಜಿ ಉಪಮುಖ್ಯಮಂತ್ರಿ ಸುದೇಶ್ ಮಹ್ತೋ ಕೂಡ ಇದ್ದರು.
ಯಶಸ್ಸನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಧೋನಿಯನ್ನು ಕೇಳಿದಾಗ, ಪ್ರಾಯೋಗಿಕ ಮತ್ತು ಪ್ರಾಮಾಣಿಕರಾಗಿ ಜೀವನದಲ್ಲಿ ಇರುವುದು ಮುಖ್ಯ ಎಂದು ಧೋನಿ ಹೇಳಿದರು. ಮನುಷ್ಯನ ದುರಾಸೆಯನ್ನು ನಿಯಂತ್ರಿಸುವುದು ಅತ್ಯಂತ ಕಷ್ಟದ ಕೆಲಸ. ದುರಾಸೆಗೆ ಮೇಲಿನ ಮಿತಿ ಇರುವುದೇ ಇಲ್ಲ ಎಂದು ಧೋನಿ ಹೇಳಿದರು.
ಇದೇ ಸಂದರ್ಭದಲ್ಲಿ ತಾವು ಏನು ಸಾಧಿಸಬೇಕೆಂಬ ಬಗ್ಗೆ ಪ್ರಾಯೋಗಿಕವಾಗಿ ಮಾನದಂಡ ವಿಧಿಸಿಕೊಳ್ಳಬೇಕು ಎಂದು ಹೇಳಿದರು. ನಾನು ಸಭ್ಯ ಕ್ರಿಕೆಟಿಗನಾಗಿದ್ದರೂ ಜಗತ್ತಿನ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ರೀತಿ ಆಗಬೇಕೆಂದು ಆಶಿಸುವುದಿಲ್ಲ ಎಂದು ನುಡಿದರು.