ಸಚಿನ್, ದ್ರಾವಿಡ್ ಬಿಳಿ ಕೋಟು ಹಾಕಬೇಕೆಂದು ಬಯಸಿದ ಸೈಮನ್ ಟೌಫಲ್

Webdunia
ಶನಿವಾರ, 30 ಮೇ 2015 (15:36 IST)
ಕ್ರಿಕೆಟರ್ ಆಗುವುದು ಸುಲಭವಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸುವ, ಅಧಿಕ ಸಂಚಲನ ಉಂಟುಮಾಡುವ ಸಮಕಾಲೀನ ಕ್ರಿಕೆಟ್ ಜಗತ್ತಿನಲ್ಲಿ ಪಂದ್ಯದ ಅಂಪೈರಿಂಗ್ ನಿರ್ವಹಿಸುವುದು ಇನ್ನೂ ಕಷ್ಟ. ಐದು ಬಾರಿ ಐಸಿಸಿ ವರ್ಷದ ಅಂಪೈರ್ ಪ್ರಶಸ್ತಿ ಗಳಿಸಿರುವ ಸೈಮನ್ ಟೌಫೆಲ್ ಅಂಪೈರ್ ಕೆಲಸದಲ್ಲಿ ತಪ್ಪುಗಳು ಅನಿವಾರ್ಯ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ಸೈಮನ್ ಟೌಫೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಶ್ರೇಷ್ಟ ಅಂಪೈರ್ ಎಂದು ಪರಿಗಣಿತರಾಗಿದ್ದಾರೆ.  ಬಿಸಿಸಿಐನ ಅಂಪೈರ್‌ಗಳ ಎಲೈಟ್ ಸಮಿತಿಗೆ ಸಲಹೆ ಮತ್ತು ಮಾರ್ಗದರ್ಶನ ಮಾಡುವುದಕ್ಕೆ ಭಾರತದಲ್ಲಿರುವ ಟೌಫೆಲ್, ರಾಷ್ಟ್ರೀಯ ಕ್ರಿಕೆಟರುಗಳಿಂದ ಅವರಿಗೆ ಸಿಗಬೇಕಾದ ಗೌರವ ಸಿಗದಿರುವುದರಿಂದ ಭಾರತದ ಸಹೋದ್ಯೋಗಿಗಳು  ಇದೊಂದು ಕಠಿಣ ಕೆಲಸ ಎಂದು ಭಾವಿಸಿದ್ದಾರೆ.
 
ಆಟಗಾರರು ಅಂಪೈರಿಂಗ್ ಎಷ್ಟು ಕಷ್ಟ ಎಂದು ಭಾರತದಲ್ಲಿ ಗೌರವಿಸುವುದನ್ನು ನಾನು ಬಯಸುತ್ತೇನೆ.  ಬಹುಶಃ ಅವರೇ ಅಂಪೈರಿಂಗ್‌ಗೆ ಪ್ರಯತ್ನಿಸಬಹುದು.  ಸಚಿನ್ ತೆಂಡೂಲ್ಕರ್ ಅಥವಾ ರಾಹುಲ್ ದ್ರಾವಿಡ್  ಬಿಳಿಯ ಕೋಟು ಹಾಕುವುದನ್ನು ಕಾಣುವುದು ಮಹತ್ವದ್ದೆನಿಸುತ್ತದೆ ಎಂದು ಟೌಫೆಲ್ ಹೇಳಿದರು. 
 
ಆಟಗಾರರು ಅಂಪೈರಿಂಗ್ ಕೆಲಸದ ಕಷ್ಟದ ಸ್ವರೂಪವನ್ನು ಸಮಾನವಾಗಿ ಗ್ರಹಿಸಲು ನಾವು ಬಯಸುತ್ತೇವೆ ಎಂದು ಇತ್ತೀಚಿನ ದಿನಗಳಲ್ಲಿ ಭಾರತೀಯ ಅಂಪೈರುಗಳ ಪ್ರಗತಿಯನ್ನು ಮೆಚ್ಚಿಕೊಳ್ಳುತ್ತಾ ಅವರು ಹೇಳಿದರು. 
 
 ಎರಡನೇ ಸೀಸನ್‌ನಲ್ಲಿ ನಾನು ಐಪಿಎಲ್ ಸೇರಿದಾಗ ಪ್ಲೇ ಆಫ್‌ನಲ್ಲಿ ಭಾರತೀಯ ಅಂಪೈರ್‍‌ಗಳು ಇರಲಿಲ್ಲ. ಈಗ 6 ವರ್ಷಗಳ ಬಳಿಕ, ಪ್ಲೇ ಆಫ್‌ನಲ್ಲಿ ಭಾಗವಹಿಸಿದ ಅನೇಕ ಭಾರತೀಯ ಅಂಪೈರ್‌ಗಳು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ನುಡಿದರು. 
 
 2004ರಲ್ಲಿ ಶ್ರೀನಿವಾಸನ್ ವೆಂಕಟರಾಘವನ್ ಎಲೈಟ್ ಪ್ಯಾನೆಲ್ ಬಿಟ್ಟ ಬಳಿಕ ಒಬ್ಬರೂ ಭಾರತೀಯ ಅಂಪೈರ್‌ಗಳು ಇರಲಿಲ್ಲ. ನಮ್ಮ ಗಮನವು ಭಾರತದ ದೇಶೀಯ ಅಂಪೈರಿಂಗ್ ಸುಧಾರಣೆ ಮಾಡುವುದಾಗಿದೆ. ನಾವು ನಾಲ್ಕು ಗುಣಮಟ್್ಟದ ಅಂತಾರಾಷ್ಟ್ರೀಯ ಪ್ಯಾನೆಲ್ ಅಂಪೈರ್‌ಗಳನ್ನು ತಯಾರು ಮಾಡಿದ್ದು, ಅವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಅವರಲ್ಲಿ ಎಸ್. ರವಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಟೌಫೆಲ್ ಹೇಳಿದರು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ICC Rankings: ಅಗ್ರಸ್ಥಾನ ಕಳೆದುಕೊಂಡ ಸ್ಮೃತಿ ಮಂಧಾನ, ಅಗ್ರ 10ರ ಪಟ್ಟಿಗೆ ಲಗ್ಗೆಯಿಟ್ಟ ಜೆಮಿಮಾ

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯನಾ.. ಬಿಸಿಸಿಐ ಮಾಡಿದ್ದು ಸರಿಯಿಲ್ಲ ಫ್ಯಾನ್ಸ್ ಆಕ್ರೋಶ

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

Show comments