ಶ್ರೀಲಂಕಾ ನೆಲದಲ್ಲಿ ಐತಿಹಾಸಿಕ ಜಯ ಸಾಧಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಕ್ರಿಕೆಟ್ ಕಣ್ಮಣಿ ಸಚಿನ್ ತೆಂಡೂಲ್ಕರ್ ಜತೆ ಅನೇಕ ಮಾಜಿ ಕ್ರಿಕೆಟ್ ತಾರೆಯಲು ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ತಂಡ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು 1993ರಲ್ಲಿ ಗೆದ್ದಿದ್ದರು. ಅಜರುದ್ದೀನ್ ನಾಯಕತ್ವದಲ್ಲಿ 1-0ಯಿಂದ ಸರಣಿ ಜಯ ಗಳಿಸಿದ್ದರು.
ಮೊದಲ ಟೆಸ್ಟ್ ಸೋತರೂ ಮುಂದಿನ ಎರಡು ಟೆಸ್ಟ್ಗಳಲ್ಲಿ ಪುಟಿದೆದ್ದು ಟೀಂ ಇಂಡಿಯಾ ಜಯಗಳಿಸಿದ್ದಕ್ಕೆ ತೆಂಡೂಲ್ಕರ್ ಅಭಿನಂದಿಸುತ್ತಾ, ಕಂಗ್ರಾಟ್ಸ್, ಟೀಂ ಇಂಡಿಯಾ, ಸರಣಿಯಲ್ಲಿ ಒನ್ ಡೌನ್ನಿಂದ ಹಿನ್ನಡೆ ಅನುಭವಿಸಿದರೂ ಭರ್ಜರಿ ಕಮ್ಬ್ಯಾಕ್. ಇನ್ನಷ್ಟು ಜಯಗಳನ್ನು ಹಾರೈಸುತ್ತೇನೆ ಎಂದು ತೆಂಡೂಲ್ಕರ್ ಟ್ವಿಟರ್ನಲ್ಲಿ ಬರೆದಿದ್ದಾರೆ.
ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ ಕೂಡ ಟೀಂ ಇಂಡಿಯಾ ಜಯಕ್ಕೆ ಅಭಿನಂದಿಸಿದ್ದಾರೆ. ಟೀಂ ಇಂಡಿಯಾದ ಅಭಿನಂದನೆಯಗಳು, ವೆಲ್ ಡನ್ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಟೀಂ ಇಂಡಿಯಾವನ್ನು ಐತಿಹಾಸಿಕ ಸರಣಿ ಜಯಕ್ಕಾಗಿ ಅಭಿನಂದಿಸಿದ್ದಾರೆ. ಟೀಂ ಇಂಡಿಯಾ ಸಾಧನೆಗೆ ದೇಶ ಹೆಮ್ಮೆಪಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.