Webdunia - Bharat's app for daily news and videos

Install App

ಬಿಸಿಸಿಐ ನಿಷೇಧ ತೆರವು ಮಾಡಲು ಶ್ರೀಶಾಂತ್ ಬಯಕೆ

Webdunia
ಬುಧವಾರ, 29 ಜುಲೈ 2015 (14:13 IST)
ತಿಹಾರ್ ಜೈಲಿನಲ್ಲಿದ್ದಾಗ  ಆತ್ಮಹತ್ಯೆಯ ಯೋಚನೆ ಮಾಡಿದ್ದ ಶ್ರೀಶಾಂತ್ ಈಗ ತಮ್ಮ ವಿರುದ್ಧ ವಿಧಿಸಿರುವ  ಜೀವಾವಧಿ ನಿಷೇಧ ತೆರವು ಮಾಡುವಂತೆ ಕೋರಲು ಬಿಸಿಸಿಸಿಯನ್ನು ಸಂಪರ್ಕಿಸುವ ಆಶಯ ಹೊಂದಿದ್ದಾರೆ. ಶ್ರೀಶಾಂತ್ ಅವರನ್ನು ಐಪಿಎಲ್ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ದೆಹಲಿ ಹೈಕೋರ್ಟ್ ದೋಷಮುಕ್ತಿಗೊಳಿಸಿತ್ತು.

 ನಾನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಭೇಟಿಗೆ ಕೋರಿದ್ದೇನೆ. ನಿಷೇಧ ತೆರವಿಗೆ ನಾನು ಅರ್ಜಿ ಸಲ್ಲಿಸಬಹುದೆಂದು ಠಾಕುರ್ ಟಿವಿ ಚಾನೆಲ್‍ವೊಂದಕ್ಕೆ ತಿಳಿಸಿದ್ದರು ಎಂದು ಶ್ರೀಶಾಂತ್ ಹೇಳಿದ್ದಾರೆ. 
 
ಬಿಸಿಸಿಐನ ಉನ್ನತಾಧಿಕಾರಿಗಳು ನನ್ನ ಮನವಿ ಪರಿಶೀಲನೆ ಮಾಡುವುದಾಗಿ ಸೂಚನೆ ನೀಡಿರುವುದರಿಂದ ನನ್ನಲ್ಲಿ ಆಶಾವಾದ ಮೂಡಿದ್ದು, ಅರ್ಜಿ ಸಲ್ಲಿಸಲು ಬಯಸಿದ್ದೇನೆ.  ಬಿಸಿಸಿಐನ  ಮುಂದಿನ ಸಭೆಯಲ್ಲಿ ಅನುಕೂಲಕರ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಆಶಿಸುತ್ತೇನೆ ಎಂದು ಶ್ರೀಶಾಂತ್ ಹೇಳಿದರು. 
 
ಕ್ರಿಕೆಟ್ ಬೆಟ್ಟಿಂಗ್ ಜಾಲದ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಿದ ಬಳಿಕ ತಾವು ಅನುಭವಿಸಿದ ಯಾತನೆಯನ್ನು ಶ್ರೀಶಾಂತ್ ವಿವರಿಸಿದರು.
 
 ಆರಂಭದಲ್ಲಿ ನಾನು ಆತ್ಮಹತ್ಯೆಯ ಬಗ್ಗೆ ಯೋಚಿಸಿದೆ. ಎಟ್ಟುಮನೂರಪ್ಪನ್ ದೇವರ ಮೇಲಿನ ನಿಷ್ಠೆಯಿಂದ ಮತ್ತು ಕುಟುಂಬ ನೀಡಿದ ಬೆಂಬಲದಿಂದ ನಾನು ದುಃಖವನ್ನು ತಡೆದುಕೊಂಡೆ ಎಂದು ಶ್ರೀಶಾಂತ್ ಹೇಳಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments