Webdunia - Bharat's app for daily news and videos

Install App

ಮುಸ್ತಫಿಜುರ್ ರಹಮಾನ್ ಘಟನೆಯಲ್ಲಿ ಧೋನಿಯದ್ದು ತಪ್ಪಿಲ್ಲ: ರವಿ ಶಾಸ್ತ್ರಿ

Webdunia
ಶನಿವಾರ, 20 ಜೂನ್ 2015 (17:49 IST)
ಭಾರತದ ಏಕದಿನ ನಾಯಕ ಧೋನಿ ಯುವ ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ತಳ್ಳಿದ್ದಕ್ಕಾಗಿ  ಬಾಂಗ್ಲಾದೇಶದಲ್ಲಿ ತೀವ್ರ ಟೀಕಾಪ್ರವಾಹಕ್ಕೆ ಗುರಿಯಾಗಿದ್ದಾರೆ. ಆದರೆ ಟೀಂ ನಿರ್ದೇಶಕ ರವಿ ಶಾಸ್ತ್ರಿ ಧೋನಿಯ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಧೋನಿಗೆ ಬೇರಾವ ಆಯ್ಕೆಯೂ ಇರದಿದ್ದರಿಂದ ಅವರು ಮಾಡಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾರೆ. 
 
ಧೋನಿ ವಾಸ್ತವವಾಗಿ ಪ್ರಮುಖ ಅವಘಡವಾಗುವುದನ್ನು ತಪ್ಪಿಸಿದ್ದಾರೆ ಎಂದು ರವಿಶಾಸ್ತ್ರಿ ವಿಶ್ಲೇಷಿಸಿದ್ದು, ನೀವು ವಿಡಿಯೋ ದೃಶ್ಯಾವಳಿ ನೋಡಿದರೆ, ಧೋನಿ ತಮ್ಮ ಬ್ಯಾಟನ್ನು ದೂರ ತೆಗೆದುಕೊಂಡು ಹೋಗಿ ಬೌಲರ್‌ಗೆ ಪೆಟ್ಟಾಗುವುದರಿಂದ ತಪ್ಪಿಸಿದರು. ಇಲ್ಲದಿದ್ದರೆ ಬೌಲರ್ ಗಾಯಗಳಿಂದಾಗಿ 3-4 ತಿಂಗಳು ಆಟದಿಂದ ಹೊರಗಿರಬೇಕಿತ್ತು ಎಂದು ರವಿ ಶಾಸ್ತ್ರಿ ವಿಶ್ಲೇಷಿಸಿದರು.
 
ಆದರೆ ಪ್ರಕರಣದ ವಿಚಾರಣೆ ಬಳಿಕ ಬೆಂಕಿಗೆ ಇಂಧನ ಸುರಿದ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಧೋನಿ ಮಾಡಿದ ಕೃತ್ಯವನ್ನು  ಅವರ ಸ್ಥಾನಮಾನದ ವ್ಯಕ್ತಿಯಿಂದ ನಿರೀಕ್ಷಿಸಿರಲಿಲ್ಲ ಎಂದು ಹೇಳುತ್ತಾ ರೆಹಮಾನ್ ಅವರನ್ನು ಉದ್ದೇಶಪೂರ್ವಕವಾಗಿ ತಳ್ಳಿದರೆಂದು ಆರೋಪಿಸಿದ್ದಾರೆ. ನಾವು ಸ್ನೇಹತ್ವ ವೃದ್ಧಿಗೆ ಆಡುತ್ತೇವೆ. ಆದರೆ ಮನಸ್ಸಿನಲ್ಲಿ ಸೇಡು ತುಂಬಿದವರು ಮಾತ್ರ ಆ ರೀತಿ ಮಾಡುತ್ತಾರೆ ಎಂದು ಅವರು ಧೋನಿಯನ್ನು ಟೀಕಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments