Webdunia - Bharat's app for daily news and videos

Install App

ಟೀಂ ಇಂಡಿಯಾ ಖಾಯಂ ನಾಯಕ ಕೊಹ್ಲಿಗೆ ಹಂಗಾಮಿ ನಾಯಕನಿಂದ ಅದ್ಭುತ ಗಿಫ್ಟ್!

Webdunia
ಗುರುವಾರ, 14 ಡಿಸೆಂಬರ್ 2017 (08:21 IST)
ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಸರಣಿಗೆ ಮೊದಲು ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ ತೀವ್ರ ಒತ್ತಡದಲ್ಲಿದ್ದರು.
 

ರೋಹಿತ್ ಐಪಿಎಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದಂತಲ್ಲ ಟೀಂ ಇಂಡಿಯಾವನ್ನು ಮುನ್ನಡೆಸುವುದು ಎಂದು ಟೀಕೆಗಳು ಕೇಳಿ ಬಂದಿತ್ತು. ಆದರೆ ದ್ವಿತೀಯ ಏಕದಿನ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ತಾವೇ ಹೆಗಲ ಮೇಲೆ ಹೊತ್ತುಕೊಂಡ ರೋಹಿತ್ ಶರ್ಮಾ ಟೀಂ ಇಂಡಿಯಾದ ಇನಿಂಗ್ಸ್ ಪೂರ್ತಿ ಆವರಿಸಿಕೊಂಡರು.

ಕೊಹ್ಲಿ ಶತಕ ಭಾರಿಸುವುದರಲ್ಲಿ ನಿಸ್ಸೀಮನಾದರೆ ರೋಹಿತ್ ತಮಗೆ ಅದೇ ಶತಕವನ್ನು ದ್ವಿಶತಕವಾಗಿ ಪರಿವರ್ತಿಸುವುದು ಎಷ್ಟು ಸುಲಭ ಎಂದು ತೋರಿಸಿಕೊಟ್ಟರು. ಶತಕವಾದ ಮೇಲೆ ಗೇರ್ ಬದಲಾಯಿಸಿದ ರೋಹಿತ್ ಕೇವಲ 35 ಎಸೆತಗಳಲ್ಲಿ ದ್ವಿಶತಕ ಭಾರಿಸಿಯೇಬಿಟ್ಟರು.

ಅವರ ಹೊಡೆತಗಳಲ್ಲಿ ಸುಸ್ತು ಎನ್ನುವುದು ಲವಲೇಶವೂ ಇರಲಿಲ್ಲ. ಲೀಲಾಜಾಲವಾಗಿ ಇನಿಂಗ್ಸ್ ಮುಗಿಸಿದ ರೋಹಿತ್ ಮುಖದಲ್ಲಿ ದೊಡ್ಡದೊಂದು ಜವಾಬ್ದಾರಿ ನಿಭಾಯಿಸಿದ ಆರಾಮವಿತ್ತು. ನಾಯಕನಾಗಿ ದ್ವಿಶತಕ ಭಾರಿಸಿದ ಎರಡನೇ ಆಟಗಾರ ರೋಹಿತ್. ಈ ಗೆಲುವಿನ ಮೂಲಕ ಸದ್ಯಕ್ಕೆ ಮದುವೆಯ ಸಂಭ್ರಮದಲ್ಲಿರುವ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ತಕ್ಕ ಉಡುಗೊರೆ ಕೊಟ್ಟಿದ್ದಾರೆ ರೋಹಿತ್ ಆಂಡ್ ಟೀಂ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲೈಂಗಿಕ ಕಿರುಕುಳ ಪ್ರಕರಣ: ಆರ್‌ಸಿಬಿ ಆಟಗಾರ ಯಶ್ ದಯಾಳ್‌ಗೆ ತಾತ್ಕಾಲಿಕ ರಿಲೀಫ್‌

WI vs AUS: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಔಟಾದ ವೆಸ್ಟ್ ಇಂಡೀಸ್

IND vs ENG: ಟೀಂ ಇಂಡಿಯಾ ಸೋಲಿಗೆ ಈ ಮೂವರು ಆಟಗಾರರೇ ಕಾರಣ

ಭುಜಬಲದ ಪರಾಕ್ರಮ ಮೆರೆದ ಮೊಹಮ್ಮದ್‌ ಸಿರಾಜ್‌ಗೆ ಐಸಿಸಿ ಶಾಕ್‌: ನಿಷೇಧದ ಭೀತಿಯಲ್ಲಿ ಭಾರತದ ವೇಗಿ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು

ಮುಂದಿನ ಸುದ್ದಿ
Show comments