Webdunia - Bharat's app for daily news and videos

Install App

ರೋಜರ್ ಬಿನ್ನಿಗೆ ಎದುರಾಗಿದೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆ

Webdunia
ಶುಕ್ರವಾರ, 30 ಅಕ್ಟೋಬರ್ 2015 (16:29 IST)
ಮುಂಬೈ: ಬಿಸಿಸಿಐನಲ್ಲಿ ಅಪ್ಪ ಆಯ್ಕೆ ಸಮಿತಿಯಲ್ಲಿದ್ದು ಪುತ್ರ  ಕ್ರಿಕೆಟ್ ಆಟಗಾರನಾಗಿದ್ದರೆ  ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಎದುರಾಗುತ್ತದೆ. ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ರೋಜರ್ ಬಿನ್ನಿ ಮತ್ತು ಅವರ ಪುತ್ರ ಸ್ಟುವರ್ಟ್ ಬಿನ್ನಿ ವಿಚಾರದಲ್ಲೂ ಅದೇ ಸಮಸ್ಯೆ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರಾಗಿ ಮತ್ತು ಬಿಸಿಸಿಐ ಅಧ್ಯಕ್ಷರಾಗಿ ಶ್ರೀನಿವಾಸನ್‌ ಕೂಡ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಎದುರಿಸಿದ್ದರು.

 ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾದ ಮೇಲೆ ಕ್ರಿಕೆಟ್ ಮಂಡಳಿಯ ಕುಂದಿದ ಇಮೇಜ್‌ಗೆ ಮತ್ತೆ ಮೆರುಗು ನೀಡುವುದಕ್ಕೆ ಕ್ಲೀನ್ ಅಪ್ ಕಾರ್ಯಾಚರಣೆಗೆ ಇಳಿದಿದ್ದಾರೆ. 
 ಅವುಗಳ ಪೈಕಿ ಹಿತಾಸಕ್ತಿ ಸಂಘರ್ಷದ ವಿವಾದಾತ್ಮಕ ವಿಷಯವೂ ಒಂದಾಗಿದೆ.  ಮನೋಹರ್ 29 ಅಂಶಗಳ ಕಾರ್ಯಸೂಚಿಯನ್ನು ಕ್ಲೀನ್ ಅಪ್ ಕಾರ್ಯಾಚರಣೆ ಭಾಗವಾಗಿ ಇಟ್ಟುಕೊಂಡಿದ್ದಾರೆ.

ಮನೋಹರ್ ಅವರ ಸುಧಾರಣೆಗಳ ಪೈಕಿ ರಾಷ್ಟ್ರೀಯ ಆಯ್ಕೆದಾರರು ಆಟಗಾರರ ಜತೆ ಯಾವುದೇ ಹಣಕಾಸು ಅಥವಾ ಉದ್ಯಮ ಹಿತಾಸಕ್ತಿ ಇಟ್ಟುಕೊಳ್ಳಬಾರದು. ಹೀಗಾಗಿ ಈ ವಿಷಯ ತಂದೆ-ಮಗ ರೋಜರ್ ಮತ್ತು ಸ್ಟುವರ್ಟ್ ಬಿನ್ನಿ ಅವರತ್ತ ಗಮನಹರಿಸಿದೆ. ಸ್ಟುವರ್ಟ್ ಭಾರತದ ಏಕದಿನ ಮತ್ತು ಟೆಸ್ಟ್ ತಂಡಗಳ ಆಟಗಾರ.  ಆದರೆ ಈಗ ರೋಜರ್ ಬಿನ್ನಿ ಅವರು ಆಯ್ಕೆ ಸಮಿತಿಯಲ್ಲಿರುವುದು ಸಮಸ್ಯಾತ್ಮಕವಾಗಿದ್ದು, ಹಿತಾಸಕ್ತಿ ಸಂಘರ್ಷಕ್ಕೆ ಎಡೆಯಾಗುವುದನ್ನು ತಪ್ಪಿಸಲು ಹುದ್ದೆ ತ್ಯಜಿಸುವಂತೆ ರೋಜರ್ ಬಿನ್ನಿಗೆ ಸೂಚಿಸಬಹುದು.   ಹಿತಾಸಕ್ತಿ ಸಂಘರ್ಷದ ಪ್ರಶ್ನೆ ತಪ್ಪಿಸುವುದಕ್ಕಾಗಿ ಮನೋಹರ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಪುತ್ರ ಅದ್ವೈತ್ ಬಿಸಿಸಿಐನ ಸ್ಥಾನವನ್ನು ತ್ಯಜಿಸಿದ್ದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments