Webdunia - Bharat's app for daily news and videos

Install App

3ನೇ ಟೆಸ್ಟ್ ಪಂದ್ಯದಿಂದ ಜಡೇಜಾ ಅಮಾನತು: ಐಸಿಸಿ ಆದೇಶ

Webdunia
ಭಾನುವಾರ, 6 ಆಗಸ್ಟ್ 2017 (18:22 IST)
2ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಜೊತೆ ಅಜೇಯ 70 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಆಲ್ರೌಂಡರ್ ರವೀಂದ್ರ ಜಡೇಜಾರನ್ನ 3ನೇ ಟೆಸ್ಟ್ ಪಂದ್ಯದಿಂದ ಅಮಾನತು ಮಾಡಲಾಗಿದೆ.

ಐಸಿಸಿ ನಿಯಮ ಉಲ್ಲಂಘಿಸಿದ ಆರೋಪದಡಿ ಜಡೇಜಾಗೆ ಪಂದ್ಯದ ಶೇ.50ರಷ್ಟು ಸಂಭಾವನೆಯ ದಂಡ ಮತ್ತು 3ನೇ ಟೆಸ್ಟ್ ಪಂದ್ಯದಿಂದ ಅಮಾನತಿನ ಶಿಕ್ಷೆ ವಿಧಿಸಲಾಗಿದೆ.

ತನ್ನದೇ ಬೌಲಿಂಗ್`ನಲ್ಲಿ ಬ್ಯಾಟ್ಸ್`ಮನ್ ಹೊಡೆದ ಬಾಲನ್ನ ಹಿಡಿದ ರವೀಂದ್ರ ಜಡೇಜಾ ರಭಸವಾಗಿ ಚೆಂಡನ್ನ ಬ್ಯಾಟ್ಸ್`ಮನ್ ದಿಮುತ್ ಕರುಣರತ್ನೆ ಕಡೆ ಅಪಘಾತಕಾರಿ ಶೈಲಿಯಲ್ಲಿ ಎಸೆದಿದ್ದರು ಎಂಬುದು ಆನ್`ಫೀಲ್ಡ್ ಅಂಪೈರ್`ಗಳಾದ ರೋಡ್ ತುಖಾರ್ ಮತ್ತು  ಬ್ರೂಸ್ ಒಕ್ಸೆನ್ ಫೋರ್ಡ್ ದೂರು ನೀಡಿದ್ದರು. ಇದು ಆಟಗಾರರ ನೀತಿ ಸಂಹಿತೆ 2.28ರ ಉಲ್ಲಂಘನೆಯಾಗಿದೆ.

ರವೀಂದ್ರ ಜಡೇಜಾ ಸಹ ರೆಫರಿ ರಿಚಿ ರಿಚರ್ಡ್ ಸನ್ ನೀಡಿದ ತೀರ್ಪನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಪಂದ್ಯದ ಶೇ. 50ರಷ್ಟು ದಂಡದ ಜೊತೆ ಆಗಸ್ಟ್ 12ರಂದು ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಟಿ ಜಾಸ್ಮಿನ್ ವಾಲಿಯಾಗೆ ಗುಡ್‌ಬೈ ಹೇಳಿದ್ರಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ: ಪುಷ್ಟಿ ನೀಡಿದ ಇಬ್ಬರ ನಡೆ

ಮತ್ತೊಂದು ವಿವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ, ಜಾಗಕ್ಕಾಗಿ ನೆರೆಹೊರೆಯರ ಜತೆ ಗುದ್ದಾಟ

IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

ಮುಂದಿನ ಸುದ್ದಿ
Show comments