Webdunia - Bharat's app for daily news and videos

Install App

ಸಿಂಹದ ಸೆಲ್ಫಿ ತೆಗೆದ ಪ್ರಕರಣದಲ್ಲಿ ಹೇಳಿಕೆ ದಾಖಲಿಸಿದ ರವೀಂದ್ರ ಜಡೇಜಾ

Webdunia
ಶನಿವಾರ, 16 ಜುಲೈ 2016 (16:56 IST)
ಕ್ರಿಕೆಟರ್ ರವೀಂದ್ರ ಜಡೇಜಾ ಜುನಾಗಡ್ ಗಿರ್‌ನ ವನ್ಯಜೀವಿ ಧಾಮದಲ್ಲಿ ಸಿಂಹಗಳ ಸೆಲ್ಫಿ ತೆಗೆದು ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ತಮ್ಮ ಅಧಿಕೃತ ಹೇಳಿಕೆಯನ್ನು ದಾಖಲಿಸಿಕೊಂಡರು.

ಒಂದು ತಿಂಗಳ ಹಿಂದೆ ಈ ವಿಷಯ ನಮ್ಮ ಗಮನಕ್ಕೆ ಬಂದ ಬಳಿಕ ನಾವು ಜಡೇಜಾರನ್ನು ಕರೆದು ಅವರ ಹೇಳಿಕೆ ನಮ್ಮ ಬಳಿ ದಾಖಲಿಸುವಂತೆ ತಿಳಿಸಿದೆವು. ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ನಾವು ಅಂತಿಮ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜುನಾಗಢ್ ಮುಖ್ಯ ಅರಣ್ಯ ಸಂರಕ್ಷಕ ಎಪಿ ಸಿಂಗ್ ತಿಳಿಸಿದ್ದಾರೆ.
 
ಜಡೇಜಾ ಹೇಳಿಕೆಯ ಒಕ್ಕಣೆಯನ್ನು ಅವರು ವಿವರಿಸಲಿಲ್ಲ. ಜಡೇಜಾ ಮತ್ತು ಪತ್ನಿ ಸಿಂಹಗಳ ಮುಂದೆ ತೆಗೆದುಕೊಂಡಿದ್ದ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗುಜರಾತ್ ಅರಣ್ಯ ಇಲಾಖೆ ಕಳೆದ ತಿಂಗಳು ತನಿಖೆಗೆ ಆದೇಶಿಸಿತ್ತು. 
 
ಅರಣ್ಯ ಗಾರ್ಡ್‌ಗಳು ಕೂಡ ಸಫಾರಿ ವಾಹನದ ಪಕ್ಕದಲ್ಲಿ ದಂಪತಿ ಜತೆ ಕೆಳಕ್ಕೆ ಇಳಿದಿದ್ದರು. ನಿಯಮಗಳ ಪ್ರಕಾರ, ಪ್ರವಾಸಿಗಳು ಅರಣ್ಯಧಾಮದ ಒಳಗೆ ವಾಹನನಗಳಿಂದ ಇಳಿಯಲು ಅವಕಾಶವಿಲ್ಲ. ಜೂನ್ 15ರಂದು ತೆಗೆದ ಒಂದು ಚಿತ್ರದಲ್ಲಿ ಜಡೇಜಾ ಮತ್ತು ಪತ್ನಿ ನೆಲದ ಮೇಲೆ ಕುಳಿತಿದ್ದು, ಸಿಂಹವೊಂದು ಅವರ ಹಿಂದೆ ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಚಿತ್ರ ಸೆರೆಹಿಡಿಯಲಾಗಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

RCB vs KKR match: ಚಿನ್ನಸ್ವಾಮಿಯಲ್ಲಿಂದು ಪಂದ್ಯ ನಡೆಯವುದೇ ಅನುಮಾನ

ಮುಂದಿನ ಸುದ್ದಿ
Show comments