ಬೆಂಗಳೂರು: ಕೊನೆಗೂ ಜಿಗುಟಿನ ಆಟಕ್ಕೆ ಕೊನೆ ಬಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನಕ್ಕೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನ್ನು 276 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕೊನೆಗೊಳಿಸಿದೆ.
ಇದರೊಂದಿಗೆ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 87 ರನ್ ಗಳ ಮಹತ್ವದ ಮುನ್ನಡೆ ಪಡೆದಿದೆ. ಈ ಪಂದ್ಯದ ಗತಿ ನೋಡಿದರೆ ಈ ಮುನ್ನಡೆ ನಿರ್ಣಾಯಕ ಪಾತ್ರ ವಹಿಸಲಿದೆ. ಭಾರತೀಯ ಬ್ಯಾಟ್ಸ್ ಮನ್ ಗಳ ಆಟ ನೋಡಿದರೆ, ಈ ಮುನ್ನಡೆ ಕಂಟಕವಾಗಲಿದೆ. ಭಾರತದ ಪರ ರವೀಂದ್ರ ಜಡೇಜಾ ಆರು ವಿಕೆಟ್ ಕಿತ್ತು ಗಮನ ಸೆಳೆದರು.
ಆದರೆ ಮೊದಲ ಟೆಸ್ಟ್ ಪಂದ್ಯದಂತೆ ಮೂರೇ ದಿನಕ್ಕೆ ಆಟ ಮುಗಿಯದಂತೆ ನೋಡಿಕೊಳ್ಳಬೇಕಾದರೆ, ಚೇತೇಶ್ವರ ಪೂಜಾರ ಭರವಸೆ ನೀಡಿದಂತೆ ಬದಲಾದ ತಂತ್ರದೊಂದಿಗೆ ಭಾರತ ಕಣಕ್ಕಿಳಿಯಬೇಕಿದೆ. ಸುಖಾ ಸುಮ್ಮನೇ ವಿಕೆಟ್ ಒಪ್ಪಿಸುವುದನ್ನು ಬಿಟ್ಟು, ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ಇನ್ನೂ ಭರ್ತಿ ಎರಡೂವರೆ ದಿನಗಳ ಆಟ ಬಾಕಿಯಿರುವುದರಿಂದ ಡ್ರಾ ಮಾಡಿಕೊಳ್ಳವುದು ಸುಲಭವಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.