ಟೀಂ ಇಂಡಿಯಾ ನಿರ್ದೇಶಕ ರವಿ ಶಾಸ್ತ್ರಿ ಅವರು ಶೀಘ್ರದಲ್ಲೇ ಉನ್ನತ ಮಟ್ಟದ ಕ್ರಿಕೆಟ್ಗೆ ಇಂಡಿಯಾ ಎ ಆಟಗಾರರನ್ನು ಗುರುತಿಸುವಂತೆ ಕೇಳುವುದಕ್ಕಾಗಿ ಇಂಡಿಯಾ ಎ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಲಿದ್ದಾರೆ.
ಈಗಾಗಲೇ ಪ್ರಬಲವಾದ ಪ್ರತಿಭಾಶಾಲಿ ಆಟಗಾರರ ತಂಡವನ್ನು ಇನ್ನಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದು ರವಿ ಶಾಸ್ತ್ರಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವರದಿಗಾರರಿಗೆ ತಿಳಿಸಿದರು. ಟೀಂ ಇಂಡಿಯಾ ಕಠಿಣವಾದ ಭಾರತ-ದಕ್ಷಿಣ ಆಫ್ರಿಕಾ ಸ್ವದೇಶಿ ಸರಣಿಗೆ ಮುನ್ನ ಟೀಂ ಇಂಡಿಯಾ ಬೆಂಗಳೂರಿನ ತರಬೇತಿ ಶಿಬಿರದಲ್ಲಿ ಭಾಗವಹಿಸಿದೆ.
ದ್ರಾವಿಡ್ ಆಟಗಾರರ ಜತೆ ಕೆಲವು ಕಾಲ ಕಳೆದಿರುವುದರಿಂದ ಇಂಡಿಯಾ ಎ ತಂಡದಲ್ಲಿ ಪ್ರತಿಭಾಶಾಲಿಗಳ ಪತ್ತೆಗೆ ಅವರು ಅರ್ಹರಾಗಿದ್ದಾರೆ. ದ್ರಾವಿಡ್ ಆಡಿರುವ ಕ್ರಿಕೆಟ್ ಪ್ರಮಾಣವನ್ನು ಗಮನಿಸಿದಾಗ ಅವರು ಟೀಂ ಇಂಡಿಯಾದಲ್ಲಿರುವ ಕೊರತೆಯನ್ನು ಯಾವ ಆಟಗಾರ ತುಂಬಬಹುದು ಎಂದು ಅರ್ಥಮಾಡಿಕೊಳ್ಳುವ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದರು.