Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಇಂದೇ ಗೆಲ್ಲಲಿದೆ ಕರ್ನಾಟಕ

ರಣಜಿ ಟ್ರೋಫಿ ಕ್ರಿಕೆಟ್: ಇಂದೇ ಗೆಲ್ಲಲಿದೆ ಕರ್ನಾಟಕ
Mohali , ಶುಕ್ರವಾರ, 9 ಡಿಸೆಂಬರ್ 2016 (15:06 IST)
ಮೊಹಾಲಿ: ಮಹಾರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಗೆಲುವಿಗೆ 55 ರನ್ ಗಳ ಗುರಿ ನೀಡಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಮಹಾರಾಷ್ಟ್ರ ತಂಡ 218 ಕ್ಕೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ 164 ರನ್ ಮುನ್ನಡೆ ಪಡೆದಿತ್ತು. ಇದರೊಂದಿಗೆ ಕರ್ನಾಟಕದ ಗೆಲುವಿನ ಅಂತರ ಕಡಿಮೆಯಾಗಿದೆ. ದ್ವಿತೀಯ ಇನಿಂಗ್ಸ್ ನಲ್ಲ ಕರ್ನಾಟಕದ ಡೇವಿಡ್ ಮಥಾಯಿಸ್ ಮೂರು ವಿಕೆಟ್ ಕಿತ್ತರು. ಅಲ್ಲದೆ ಎಲ್ಲಾ ಬೌಲರ್ ಗಳೂ ಸಾಂಘಿಕ ಪ್ರದರ್ಶನ ನೀಡಿದರು. ಮಹಾರಾಷ್ಟ್ರದ ಪರ ಕೇದಾರ್ ಜಾದವ್ 85 ರನ್ ಗಳಿಸಿದರು.

ಕಳೆದ ಪಂದ್ಯ ಸೋತು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದ ಕರ್ನಾಟಕಕ್ಕೆ ಈ ಗೆಲುವು ನಿರ್ಣಾಯಕವೆನಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ ಎಂಎಸ್ ಧೋನಿ