ಮೊಹಾಲಿ: ರಣಜಿ ಟ್ರೋಫಿ ಪಂದ್ಯಾವಳಿಯ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳ ಮುನ್ನಡೆ ಲಭಿಸಿದೆ. 313 ಕ್ಕೆ 9 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದೆ.
ಬೌಲಿಂಗ್ ನಲ್ಲಿ ಮಿಂಚಿದ್ದ ನಾಯಕ ವಿನಯ್ ಕುಮಾರ್ ಬ್ಯಾಟಿಂಗ್ ನಲ್ಲೂ 36 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಎಷ್ಟೇ ರನ್ ಗಳಿಸಿದರೂ ರಾಜ್ಯದ ಹುಡುಗರಿಗೆ ಅದು ಪ್ಲಸ್ ಪಾಯಿಂಟ್.
ಇನ್ನೂ ಎರಡು ದಿನದ ಪಂದ್ಯ ಬಾಕಿಯಿದೆ. ಬೌಲರ್ ಗಳೂ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಮೊದಲ ಇನಿಂಗ್ಸ್ ಮುನ್ನಡೆ ದಾಟಿ ಎದುರಾಳಿ ಗೆಲುವಿಗೆ ಪೈಪೋಟಿಯುತ ಮೊತ್ತ ನೀಡುವುದು ಸುಲಭದ ಮಾತಲ್ಲ. ಹಾಗಾಗಿ ಕರ್ನಾಟಕ ಮತ್ತೆ ಗೆಲುವಿನ ಹಳಿಗೆ ಬರುವ ನಿರೀಕ್ಷೆ ಹೆಚ್ಚಾಗಿದೆ. ಮತ್ತೆ ಅಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆಯುವುದು ಗ್ಯಾರಂಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ