ಮುಂಬೈ: ರಣಜಿ ಟ್ರೋಪಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕದ ವಿರುದ್ಧ ಮೊದಲ ದಿನದ ಅಂತ್ಯಕ್ಕೆ ಅಸ್ಸಾಂ ತಂಡ 6 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿದೆ.
ಕಳೆದ ಪಂದ್ಯದಲ್ಲಿ ಮಾಡಿದಂತೆ ಕರ್ನಾಟಕದ ಬೌಲರ್ ಗಳ ಜಾದೂ ಇಲ್ಲಿ ನಡೆಯಲಿಲ್ಲವಾದರೂ ಶಿಸ್ತು ಬದ್ಧ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಪರ ಶ್ರೀನಾಥ್ ಅರವಿಂದ್ ಉತ್ತಮ ದಾಳಿ ಸಂಘಟಿಸಿ ಐದು ವಿಕೆಟ್ ಗಳ ಗೊಂಚಲು ಪಡೆದುಕೊಂಡರು. ಉಳಿದ ಒಂದು ವಿಕೆಟ್ ಬಿನ್ನಿ ಪಾಲಾಯಿತು.
ಅಸ್ಸಾಂ ಪರ ಉತ್ತಮ ಬ್ಯಾಟಿಂಗ್ ಮಾಡಿದ ಅಮಿತ್ ವರ್ಮಾ 259 ಎಸೆತ ಎದುರಿಸಿ 18 ಫೋರ್ ಮತ್ತು ಒಂದು ಸಿಕ್ಸರ್ ಗಳ ನೆರವಿನಿಂದ 125 ರನ್ ಗಳಿಸಿದರು. ಇನ್ನೂ ಅಜೇಯರಾಗಿರುವ ವರ್ಮಾ ಮತ್ತು ಅರ್ಧಶತಕ ಗಳಿಸಿರುವ ಎಸ್. ಪುರ್ಕಯಾಸ್ತ ನಾಳೆ ತಂಡದ ಮೊತ್ತವನ್ನು ಎಷ್ಟು ಹೆಚ್ಚಿಸುತ್ತಾರೆಂದು ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ