ಈ ಬ್ಯಾಟ್ಸ್ ಮನ್ ಜತೆಗೆ ಜೀವನ ಪೂರ್ತಿ ಬ್ಯಾಟಿಂಗ್ ಮಾಡಲು ರಾಹುಲ್ ದ್ರಾವಿಡ್ ರೆಡಿಯಂತೆ!

Webdunia
ಬುಧವಾರ, 25 ಜುಲೈ 2018 (10:25 IST)
ಮುಂಬೈ: ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಜನ ಜನಿತವಾಗಿರುವ ರಾಹುಲ್ ದ್ರಾವಿಡ್ ತಮ್ಮ ಮೆಚ್ಚಿನ ಕ್ರಿಕೆಟಿಗರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 

ಜೀವನ ಪೂರ್ತಿ ಒಬ್ಬ ಕ್ರಿಕೆಟಿಗನೊಂದಿಗೆ ಬ್ಯಾಟಿಂಗ್ ಮಾಡುತ್ತೀರೆಂದರೆ ಅವರು ಯಾರಾಗಬಹುದು ಎಂದು ದ್ರಾವಿಡ್ ಗೆ ಪ್ರಶ್ನಿಸಿದಾಗ ಅವರು ಸಚಿನ್ ತೆಂಡುಲ್ಕರ್ ಹೆಸರು ಹೇಳಿದ್ದಾರೆ.

‘ನಾನು ಆಡಿದ ಶ್ರೇಷ್ಠ ಆಟಗಾರನೆಂದರೆ ಸಚಿನ್ ತೆಂಡುಲ್ಕರ್. ಕ್ಲಾಸ್ ಮತ್ತು ಕ್ವಾಲಿಟಿ ಎರಡಲ್ಲೂ ಅವರು ಬೆಸ್ಟ್. ಹಾಗಾಗಿ ಸಚಿನ್ ಜತೆಗೆ ಬ್ಯಾಟ್ ಮಾಡಲು ಇಷ್ಟಪಡುವೆ’ ಎಂದು ದ್ರಾವಿಡ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಸಮಕಾಲೀನರಲ್ಲದ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥ್ ಜತೆಗೆ ಬ್ಯಾಟಿಂಗ್ ಮಾಡಲು ಬಯಸುವೆ ಎಂದಿದ್ದಾರೆ.

ಇನ್ನು ಕೋಲ್ಕೊತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಇನಿಂಗ್ಸ್ ಆಡುವಾಗ ಆಸೀಸ್ ಆಟಗಾರರು ತನ್ನನ್ನು ಸ್ಲೆಡ್ಜಿಂಗ್ ಮಾಡಿದ್ದನ್ನು ದ್ರಾವಿಡ್ ತಮಾಷೆಯ ಸ್ಲೆಡ್ಜಿಂಗ್ ಎಂದಿದ್ದಾರೆ. ನಾನು ಮೂರನೇ ಕ್ರಮಾಂಕದ ಆಟಗಾರನೆಂದು ಟೆಸ್ಟ್ ಆಡಿದ್ದೆ. ಆದರೆ 6 ನೇ ಕ್ರಮಾಂಕದಲ್ಲಿ ಆಡಿದ್ದೆ. ಹೀಗಾಗಿ ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಆಸೀಸ್ ಆಟಗಾರರು ಮುಂದಿನ ಟೆಸ್ಟ್ ನಲ್ಲಿ ನೀನು 12 ನೇ ಆಟಗಾರ ಎಂದು ಸ್ಲೆಡ್ಜಿಂಗ್ ಮಾಡಿದ್ದರು. ಇದು ನನಗೆ ತಮಾಷೆ ಎನಿಸಿತ್ತು ಎಂದು ದ್ರಾವಿಡ್ ಸ್ಮರಿಸಿದ್ದಾರೆ.

ಪ್ರಸಕ್ತ ವಿಶ್ವ ಬೌಲರ್ ಗಳ ಪೈಕಿ ದ.ಆಫ್ರಿಕಾದ ಕಗಿಸೋ ರಬಾಡಾ ಬೌಲಿಂಗ್ ಎದುರಿಸುವುದು ಕಷ್ಟವಾಗಬಹುದು ಎಂದಿರುವ ದ್ರಾವಿಡ್ ಭಾರತೀಯರ ಪೈಕಿ ಭುವನೇಶ್ವರ್ ಕುಮಾರ್ ಬೆಸ್ಟ್ ಬೌಲರ್ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಮುಂದಿನ ಸುದ್ದಿ
Show comments