Webdunia - Bharat's app for daily news and videos

Install App

ಲಂಚದ ಆರೋಪ ಎದುರಿಸಿದ ಆಟಗಾರರಿಗೆ ಕ್ಲೀನ್ ಚಿಟ್ : ಅನುರಾಗ್ ಠಾಕೂರ್

Webdunia
ಸೋಮವಾರ, 29 ಜೂನ್ 2015 (14:11 IST)
ಐಸಿಸಿ ತನಿಖೆಯಿಂದ ಯಾವುದೇ ಫಲಿತಾಂಶ ಬರದಿರುವುದರಿಂದ ಲಂಚದ ಆರೋಪ ಎದುರಿಸುತ್ತಿರುವ ಮೂವರು ಆಟಗಾರರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.  ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ 2013ರಲ್ಲಿ ಐಸಿಸಿಗೆ ಪತ್ರವೊಂದನ್ನು ಬರೆದು, ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಮೂವರು ಆಟಗಾರರಿಗೆ ಮುಂಬೈನ ಬಿಲ್ಡರ್ ಲಂಚ ನೀಡಿದ್ದಾರೆಂದು ಆರೋಪಿಸಿದ್ದರು.
 
ರವೀಂದ್ರ ಜಡೈಜಾ, ಡ್ವೇನ್ ಬ್ರೇವೊ ಮತ್ತು ಸುರೇಶ್ ರೈನಾ ಸ್ಥಿರಾಸ್ತಿ ದೊರೆ ಬಾಬಾ ದಿವಾನ್ ಜೊತೆ ನಿಕಟ ಸಂಪರ್ಕದಲ್ಲಿದ್ದು, ದಿವಾನ್ ಈ ಮೂವರಿಗೆ ತಲಾ 20 ಕೋಟಿ ರೂ. ಮೊತ್ತದ ನಗದು ಮತ್ತು ಫ್ಲಾಟ್‌ಗಳನ್ನು ಪಾವತಿ ಮಾಡಿದ್ದಾರೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದರು. ಮೋದಿ ಪತ್ರ ತಲುಪಿದ್ದಾಗಿ ಹಾಗೂ  ಸೂಕ್ತ ಕ್ರಮ ಕೈಗೊಂಡಿದ್ದಾಗಿ ಮತ್ತು ಬಿಸಿಸಿಐ ಭಯೋತ್ಪಾದನೆ ವಿರೋಧಿ ಘಟಕದ ಜೊತೆ ಹಂಚಿಕೊಂಡಿದ್ದಾಗಿ ಐಸಿಸಿ ತಿಳಿಸಿತ್ತು.
 
ತನಿಖೆ ನಡೆಸುವುದು ಐಸಿಸಿ ವ್ಯಾಪ್ತಿಗೆ ಬರುವುದರಿಂದ, ಐಸಿಸಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಅರ್ಥವೇನೆಂದರೆ, ಆಟಗಾರರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಠಾಕೂರ್ ಹೇಳಿದರು. 
 
 ಇಬ್ಬರು ಆಟಗಾರರ ವಿರುದ್ಧ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಈ ವಿಷಯದ ಪರಿಶೀಲನೆ ಐಸಿಸಿ ವ್ಯಾಪ್ತಿಗೆ ಬರುತ್ತದೆ ಎಂದು ಠಾಕೂರ್ ಖಚಿತಪಡಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments