Webdunia - Bharat's app for daily news and videos

Install App

ಜಿಂಬಾಬ್ವೆ ಪ್ರವಾಸ ಡೋಲಾಯಮಾನ: ಬಾಂಗ್ಲಾಗೆ ಆಹ್ವಾನ ನೀಡಿದ ಪಿಸಿಬಿ

Webdunia
ಶುಕ್ರವಾರ, 15 ಮೇ 2015 (15:35 IST)
ಪಾಕಿಸ್ತಾನದಲ್ಲಿ ಬಸ್ ಮೇಲೆ ಮತ್ತೆ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಜಿಂಬಾಬ್ವೆ ತಂಡದ ಪಾಕ್ ಪ್ರವಾಸ ಡೋಲಾಯಮಾನ ಸ್ಥಿತಿಯಲ್ಲಿರುವ ನಡುವೆ, ಪಿಸಿಬಿಯು ಬಾಂಗ್ಲಾದೇಶವನ್ನು ಭಯೋತ್ಪಾದನೆ ಪೀಡಿತ ಪಾಕ್‌ನಲ್ಲಿ ಆಡುವುದಕ್ಕೆ ಆಹ್ವಾನ ನೀಡಿದೆ. 
 
 ಇಸ್ಮೈಲಿ ಸಮುದಾಯಕ್ಕೆ ಸೇರಿದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರಿಂದ 18 ಮಹಿಳೆಯರು ಸೇರಿದಂತೆ 46 ಜನರು ಮೃತಪಟ್ಟಿದ್ದರು.  ಪಾಕ್‌ನಲ್ಲಿ ಭಯೋತ್ಪಾದನೆ ಮತ್ತೆ ಜೀವತಳೆದಿರುವ ಹಿನ್ನಲೆಯಲ್ಲಿ ಜಿಂಬಾಬ್ವೆ  ಕೂಡ ಪಾಕಿಸ್ತಾನಕ್ಕೆ ನಿಗದಿ ಮಾಡಿದ್ದ ಪ್ರವಾಸದ ಬಗ್ಗೆ ಪುನರ್ಪರಿಶೀಲನೆ ನಡೆಸುತ್ತಿದೆ.   ಭಾರತ ಪ್ರವಾಸದ ಬಳಿಕ ಹಿಂತಿರುಗಿದ ಪಿಸಿಬಿ ಅಧ್ಯಕ್ಷ ಶಹರ್‌‍‌ಯಾರ್ ಖಾನ್ ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಇನ್ನಷ್ಟು ತಂಡಗಳು ಬರುವ ಆಶಯವನ್ನು ವ್ಯಕ್ತಪಡಿಸಿದರು. 
 
 ನಾವು ಬಾಂಗ್ಲಾದೇಶ ಮಂಡಳಿಯನ್ನು ಅವರ ತಂಡವನ್ನು ಕಳಿಸುವಂತೆ ಆಹ್ವಾನ ನೀಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಢಾಕಾದಲ್ಲಿ ಅವರ ಅಧಿಕಾರಿಗಳ ಜೊತೆ ಸಕಾರಾತ್ಮಕ ಚರ್ಚೆಗಳನ್ನು ನಡೆಸಿರುವುದಾಗಿ ಶಹರ್‌ಯಾರ್ ತಿಳಿಸಿದರು. 
 
 ಢಾಕಾದಲ್ಲಿ ಕೆಲವು ದಿನ ಕಳೆದಿದ್ದ ಪಿಸಿಬಿ ಮುಖ್ಯಸ್ಥ ಭಾರತ ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧದ ಪುನಶ್ಚೇತನದ ಚರ್ಚೆಗೆ ಬಿಸಿಸಿಐ ಮತ್ತು ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments