Webdunia - Bharat's app for daily news and videos

Install App

ಟೀಂ ಇಂಡಿಯಾದಲ್ಲಿ ಹಳೇ ಆಟಗಾರರು ಮಾತ್ರವಲ್ಲ, ಆಟವೂ ಹಳೆಯದೇ!

Webdunia
ಭಾನುವಾರ, 15 ಜನವರಿ 2017 (17:11 IST)
ಪುಣೆ:  ಟೀಂ ಇಂಡಿಯಾಕ್ಕೆ ಹಳೇ ಆಟಗಾರರು ಎಂಟ್ರಿ ಕೊಟ್ಟಿರುವುದು ಮಾತ್ರವಲ್ಲ, ಅವರ ಆಟವೂ ಹಳೇ ಕಾಲವನ್ನು ನೆನಪಿಸುವಂತೇ ಇತ್ತು. ಯಾಕೆಂದರೆ ಟೀಂ ಇಂಡಿಯಾ ಪಟ ಪಟ ವಿಕೆಟ್ ಉರುಳಿಸುವ ಹೊತ್ತಿಗೆ ಇಂಗ್ಲೆಂಡ್ ರನ್ ಗುಡ್ಡೆಯ ಮೇಲೆ ನಿಂತು ನಗುತ್ತಿತ್ತು.


ಪುಣೆಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲೇ ಸಣ್ಣ ಮೈದಾನ. ಜತೆಗೆ ಭಾರತದ ಬೌಲರ್ ಗಳದ್ದೂ ದಿಕ್ಕಾಪಾಲಾದ ಬೌಲಿಂಗ್. ಸ್ವಲ್ಪ ಬ್ಯಾಟ್ ಮೇಲೆತ್ತಿದರೂ ಸಾಕು. ಬಾಲ್ ಆಕಾಶದೆತ್ತರಕ್ಕೆ ಹಾರಿ ಬೌಂಡರಿ ಗೆರೆ ದಾಟುತ್ತಿತ್ತು. ಇದೆಲ್ಲಾ ಕೆಲ ವರ್ಷದ ಹಿಂದೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತ ಯಾವತ್ತೂ ತವರಿನಲ್ಲಿ ಇಷ್ಟೊಂದು ಹೀನಾಯವಾಗಿ ಆಡಿರಲಿಲ್ಲವೇನೋ.

ಮೊದಲ ಬಾರಿಗೆ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿಗೆ ಆಗಾಗ ಹಳೇ ನಾಯಕ ಧೋನಿ ಸಲಹೆ ಕೊಡುತ್ತಿದ್ದುದು ಕಂಡುಬಂತು. ಆದರೂ ಇಂಗ್ಲೆಂಡ್  ಬ್ಯಾಟಿಂಗ್ ಹಡಗನ್ನು ಜೋ ರೂಟ್ ಹೊತ್ತುಕೊಂಡು ಅಗತ್ಯಕ್ಕೆ ತಕ್ಕಂತೆ ಇನಿಂಗ್ಸ್ ಕಟ್ಟಿದರು. ಇದರಿಂದಾಗಿ ಸಹ ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸುವುದು ಸರಾಗವಾಯಿತು. ಜೋ ರೂಟ್ 78 ರನ್ ಗಳಿಸಿ ಔಟಾಗುವಷ್ಟರಲ್ಲಿ ಇಂಗ್ಲೆಂಡ್ ಸುಸ್ಥಿತಿಗೆ ತಲುಪಿತ್ತು.

ಹೀಗಾಗಿ ಮತ್ತೆ ಬಂದ ಬ್ಯಾಟ್ಸ್ ಮನ್ ಗಳು ಯದ್ವಾ ತದ್ವಾ ಚಚ್ಚಿದರು. ಬೆನ್ ಸ್ಟೋಕ್ ಕೇವಲ 40 ಎಸೆತಗಳಲ್ಲಿ 62 ರನ್ ಗಳಿಸಿದರು. ಬಂದವರೆಲ್ಲಾ ಈ ರೀತಿ ಸಿಕ್ಸರ್ ಸಿಡಿಸುತ್ತಿದ್ದರೆ ಇಂಗ್ಲೆಂಡ್ ಸ್ಕೋರ್ 50 ಓವರ್ ಗಳಲ್ಲಿ ಭರ್ತಿ 350 ರನ್.

ಭಾರತೀಯ ಬೌಲರ್ ಗಳ ಪೈಕಿ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಕಿತ್ತರಾದರೂ, ಸಾಕಷ್ಟು ರನ್ ಬಿಟ್ಟುಕೊಟ್ಟರು. ಅದರಲ್ಲೂ ಬುಮ್ರಾ ಸಂಪೂರ್ಣ ಹಳಿ ತಪ್ಪಿದ್ದರು. ಇನ್ನು ಸ್ಪಿನ್ನರ್ ಗಳು ಯಾವುದೇ ಮೋಡಿ ಮಾಡಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅರ್ಷ್ ದೀಪ್ ಸಿಂಗ್ ರನ್ನು ಟೀಂ ಇಂಡಿಯಾ ಹೊರಗಿಡುತ್ತಿರುವುದೇಕೆ, ಇಲ್ಲಿದೆ ಕಾರಣ

ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

ಬಾಯ್ಕಾಟ್ ಎನ್ನುತ್ತಿದ್ದರೂ ಭಾರತ ಪಾಕಿಸ್ತಾನ ಮ್ಯಾಚ್ ಟಿಕೆಟ್ ಗೆ ಭರ್ಜರಿ ಬೆಲೆ

Asia Cup Cricket: ಯುಎಇ ನೀಡಿದ ಗುರಿಯನ್ನು ನಾಲ್ಕೇ ಓವರ್ ಗಳಲ್ಲಿ ಚಚ್ಚಿದ ಬಿಸಾಕಿದ ಟೀಂ ಇಂಡಿಯಾ

ಕ್ರಿಕೆಟಿಗ ಪೃಥ್ವಿ ಶಾಗೆ ಕೋರ್ಟ್‌ನಿಂದ ಬಿತ್ತು ₹100ದಂಡ, ಪ್ರಕರಣ ಹಿನ್ನೆಲೆ ಏನ್‌ ಗೊತ್ತಾ

ಮುಂದಿನ ಸುದ್ದಿ
Show comments