ಕೋಲ್ಕೊತ್ತಾ: ರಣಜಿ ಪಂದ್ಯಾವಳಿಗಳ ವೇಳಾಪಟ್ಟಿ ಬದಲಾವಣೆ ಬಗ್ಗೆ ಪ್ರಸ್ತಾಪನೆ ಬಂದಿದೆಯಷ್ಟೆ. ಆದರೆ ಅದನ್ನು ಬದಲಾಯಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಬಿಸಿಸಿಐ ಯ ತಾಂತ್ರಿಕ ಸಮಿತಿ ಮುಖ್ಯಸ್ಥ ಸೌರವ್ ಗಂಗೂಲಿ ತಿಳಿಸಿದ್ದಾರೆ.
ದೆಹಲಿಯ ವಾತಾವರಣ ಬಿಗಡಾಯಿಸಿದ ಹಿನ್ನಲೆಯಲ್ಲಿ 2016-17 ರ ರಣಜಿ ಟ್ರೋಫಿ ಐದನೇ ಹಂತದ ಪಂದ್ಯಗಳ ವೇಳಾಪಟ್ಟಿ ಬದಲಾಯಿಸಲು ಬಿಸಿಸಿಐ ತೀರ್ಮಾನಿಸಿತ್ತು ಎಂದು ಈ ಹಿಂದೆ ಬಿಸಿಸಿಐ ಮೂಲಗಳು ಹೇಳಿತ್ತು.
ಇದು ತಾಂತ್ರಿಕ ಸಮಿತಿ ನಿರ್ಧರಿಸುವ ವಿಷಯವಲ್ಲ. ಹಾಗಿದ್ದರೂ ಬಿಸಿಸಿಐ ಇದನ್ನು ತಾಂತ್ರಿಕ ಸಮಿತಿಗೆ ವರ್ಗಾಯಿಸಿದೆ. ಆದರೆ ಈ ಬಗ್ಗೆ ನಾವು ಇನ್ನೂ ಏನನ್ನೂ ನಿರ್ಧರಿಸಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ