ಭಾರತದ ವೇಗಿ ಮಹಮ್ಮದ್ ಶಮಿ ಮಂಡಿ ನೋವಿನಿಂದ ಚೇತರಿಸಿಕೊಂಡಿದ್ದು, ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮುಂದಿನ ಗ್ರೂಪ್ ಲೀಗ್ ಪಂದ್ಯದ ಆಯ್ಕೆಗೆ ಲಭ್ಯವಿದ್ದಾರೆ. ಯುಎಇ ಪಂದ್ಯಕ್ಕೆ ಶಮಿಗೆ ಮುನ್ನಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲಾಗಿತ್ತು.
ಬಂಗಾಳದ ವೇಗಿ ಮುರ್ಡೋಕ್ ವಿವಿ ಸಂಕೀರ್ಣದ ತರಬೇತಿ ಚಟುವಟಿಕೆಯಲ್ಲಿ ಪಾಲ್ಗೊಂಡರು. ಫೀಲ್ಡಿಂಗ್ ಅಭ್ಯಾಸಗಳಲ್ಲಿ ಕೂಡ ಪಾಲ್ಗೊಂಡು ಸ್ವಲ್ಪ ಬೌಲಿಂಗ್ ಕೂಡ ಮಾಡಿದರು. ಶಮಿ ಅವರನ್ನು ಮತ್ತೆ ಆಡಿಸಿದರೆ ಭುವನೇಶ್ವರ್ ಕುಮಾರ್ ಅವರನ್ನು ಕೂರಿಸಬಹುದು. ಭುವನೇಶ್ವರ್ ಕುಮಾರ್ ಇಂದು ಬರಿಗಾಲಿನಲ್ಲಿ ಡ್ರೆಸ್ಸಿಂಗ್ ರೂಂ.ಗೆ ಆಗಮಿಸಿದಾಗ ಹಿಮ್ಮಡಿಗೆ ಬ್ಯಾಂಡೇಜ್ ಹಾಕಿದ್ದು ಕಂಡುಬಂದಿದೆ.
ಕೊನೆಯ ಪಂದ್ಯದಲ್ಲಿ ಪೂರ್ಣಾವಧಿ ಬೌಲಿಂಗ್ ಮಾಡಿದ್ದರಿಂದ ಹಿಮ್ಮಡಿ ಗಾಯ ಹೆಚ್ಚಾಗದಂತೆ ಅವರು ಟೇಪ್ ಹಾಕಿರಬಹುದೆಂದು ಭಾವಿಸಲಾಗಿದೆ. ಉಳಿದ ಮೈದಾನಗಳಿಗೆ ಹೋಲಿಸಿದರೆ ಡಬ್ಲ್ಯುಎಸಿಎ ಗಟ್ಟಿ ನೆಲವಾಗಿದ್ದು ಬೌಲಿಂಗ್ ಎಸೆತದಲ್ಲಿ ಹಿಮ್ಮಡಿಗೆ ಹೆಚ್ಚು ಪೆಟ್ಟು ಬೀಳುವುದರಿಂದ ಭುವನೇಶ್ವರ್ ಹಿಮ್ಮಡಿಗೆ ಪುನಃ ಹಾನಿಯಾಗಿಯೆಯೋ ಇಲ್ಲವೋ ಎನ್ನುವುದು ತಿಳಿದುಬಂದಿಲ್ಲ.