Webdunia - Bharat's app for daily news and videos

Install App

ದೇಶದ ಎಲ್ಲಾ ಕ್ರೀಡಾ ಒಕ್ಕೂಟಗಳ ಮೇಲೂ ಸುಪ್ರೀಂ ಕೋರ್ಟ್ ಚಾಟಿ ಬೀಸಲಿ

ಕೃಷ್ಣವೇಣಿ ಕೆ
ಸೋಮವಾರ, 2 ಜನವರಿ 2017 (18:04 IST)
ನವದೆಹಲಿ: ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐನಲ್ಲಿ ಬಿರುಗಾಳಿ ಎದ್ದಿದೆ. ಅದರ ನಿಯಂತ್ರಣ ಇದೀಗ ಸಂಪೂರ್ಣವಾಗಿ ಉಚ್ಛ ನ್ಯಾಯಾಲಯದ ಕೈಯಲ್ಲಿದೆ. ಇದುವರೆಗೆ ವಿಶ್ವ ಕ್ರಿಕೆಟ್ ನ ಸಾಮ್ರಾಟನಾಗಿ ಮೆರೆಯುತ್ತಿದ್ದ ಸಂಸ್ಥೆ ಇದೀಗ ಕುಸಿದು ಬಿದ್ದಿದೆ.


ಎಲ್ಲಾ ಲೋಧಾ ಸಮಿತಿ ವರದಿಯ ಇಫೆಕ್ಟ್.  ಯಾವಾಗ ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಲೋಧಾ ಸಮಿತಿ ಬಿಸಿಸಿಐನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನೆಲ್ಲಾ ಬಯಲಿಗೆಳೆದಿತ್ತೋ ಅಲ್ಲಿಂದ ಸಂಕಷ್ಟದ ಸರಮಾಲೆ ಶುರುವಾಗಿತ್ತು. ಅಷ್ಟಾದರೂ, ಸುಪ್ರೀಂ ಕೋರ್ಟ್ ತನಗೇನೂ ಮಾಡಲಾಗದು ಎಂಬ ಹುಂಬುತನದಲ್ಲೇ ಬಿಸಿಸಿಐನ ದೊಡ್ಡ ತಲೆಗಳು ಅಂದುಕೊಂಡಿದ್ದರು.

ಹಿಂದೊಮ್ಮೆ ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಯಾಗಿರುವ ಬಿಸಿಸಿಐ ನನ್ನು ದೇಶದ ಇತರ ಕ್ರೀಡಾ ಸಂಸ್ಥೆಗಳಂತೆ ತನ್ನ ಸುಪರ್ದಿಗೆ ತರುವ ಪ್ರಯತ್ನ ನಡೆಸಿತ್ತಾದರೂ, ರಾಜಕೀಯ ನಾಯಕರ ಶಕ್ತಿಯಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯೂ ಹಾಗೇ ಆಗಬಹುದು ಎಂದು ಲೆಕ್ಕಾಚಾರ ಹಾಕಿದ್ದ ಬಿಸಿಸಿಐ ದೊರೆಗಳಿಗೆ ಸುಪ್ರೀಂ ಕೋರ್ಟ್ ಸರಿಯಾಗಿ ಚಾಟಿ ಬೀಸಿದೆ.

ಆದರೆ ಇದರಿಂದಾಗಿ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹಾಳಾಗಬಾರದು, ಅದು ಯಥಾ ಸ್ಥಿತಿಯಲ್ಲಿದ್ದರೆ ಸಾಕು ಎಂಬುದಷ್ಟೇ ಅಭಿಮಾನಿಗಳ ಪ್ರಾರ್ಥನೆ. ಟಿವಿ ಪ್ರಸಾರ, ಜಾಹೀರಾತುಗಳಿಂದ ಕೋಟಿ ಕೋಟಿ ಸಂಪಾದನೆ ಮಾಡಿರುವ ಬಿಸಿಸಿಐ ಯಾರಿಗೂ ಲೆಕ್ಕಾಚಾರ ಕೊಡಬೇಕಾಗಿರಲಿಲ್ಲ. ಹಿಂದೆಲ್ಲಾ ಅವ್ಯವಹಾರದ ಬಗ್ಗೆ ವಾಸನೆ ಬಂದರೂ, ದೊರೆಗಳು ಅಲ್ಲಿಯೇ ಅದನ್ನು ಹೊಸಕಿ ಹಾಕಿ ಬಿಡುತ್ತಿದ್ದರು.

ವಿಶೇಷವೆಂದರೆ 70 ವರ್ಷ ಮೇಲ್ಪಟ್ಟವರು ಬಿಸಿಸಿಐ ಉನ್ನತ ಹುದ್ದೆಗಳಲ್ಲಿ ಮುಂದುವರಿಯಬಾರದು ಎಂದು ನ್ಯಾಯಾಲಯ ಕಟ್ಟಪ್ಪಣೆ ಮಾಡಿದೆ. ಇದು ದೇಶದ ಕ್ರಿಕೆಟ್ ಹಿತಾಸಕ್ತಿಯಿಂದ ಸ್ವಾಗತಾರ್ಹ. ಯುವಕರೇ ಕ್ರೀಡಾ ಸಂಸ್ಥೆಗಳ ಚುಕ್ಕಾಣಿ ಹಿಡಿದರೆ, ಅವರಿಗೆ ಯವಕರ ಮನಸ್ಥಿತಿ ಚೆನ್ನಾಗಿ ಅರಿವಾಗುತ್ತದೆ.

ಇದು ಎಲ್ಲಾ ಕ್ರೀಡೆಗಳಿಗೂ ಅನ್ವಯಿಸಬೇಕು. ನಮ್ಮ ದೇಶದಲ್ಲಿ ಇತರೆ ಕ್ರೀಡಾ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿರುವವರೆಲ್ಲಾ ವಯಸ್ಸಾದವರು, ರಾಜಕಾರಣಿಗಳು. ಇದರಿಂದಾಗಿ ಕ್ರೀಡೆ ಕುಂಠಿತಗೊಳ್ಳುತ್ತಿದೆ. ಕ್ರೀಡಾಳುಗಳ ನಿಜವಾದ ಅಗತ್ಯಗಳು ಪೂರೈಕೆಯಾಗುತ್ತಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ.

ನಮ್ಮಲ್ಲಿ ಉತ್ಸಾಹಿ ಯುವಕರು ಕ್ರೀಡೆಯನ್ನು ಮುನ್ನಡೆಸಬೇಕಿದೆ. ಬಿಸಿಸಿಐ ವಿರುದ್ಧ ಕೈಗೊಂಡ ಕ್ರಮವನ್ನು ಸುಪ್ರೀಂ ಕೋರ್ಟ್ ದೇಶದ ಇತರ ಕ್ರೀಡಾ ಸಂಸ್ಥೆಗಳ ಮೇಲೂ ಮಾಡಬೇಕಿದೆ. ರಾಜಕಾರಣದಲ್ಲಿ ವಂಶ ಪಾರಂಪರ್ಯವರಿವಂತೆ ನಮ್ಮ ಕೆಲವು ಕ್ರೀಡಾ ಸಂಸ್ಥೆಗಳಲ್ಲೂ ವಂಶ ಆಡಳಿತವಿದೆ. ಇದು ಕೊನೆಗೊಂಡು ಅರ್ಹರಿಗೆ ಅಧಿಕಾರ ನೀಡುವ ಕೆಲಸವಾಗಬೇಕಿದೆ. ಹಾಗಿದ್ದರೆ ಮಾತ್ರ, ನಮ್ಮಲ್ಲಿ ಕ್ರೀಡೆ, ಕ್ರೀಡಾಳುಗಳು ಉಳಿಯಲು ಸಾಧ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾಗೆಲ್ಲಾ ನಾವು ಹೆದರಲ್ಲ ಎಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಮುಂದಿನ ಸುದ್ದಿ
Show comments