Webdunia - Bharat's app for daily news and videos

Install App

ಶ್ರೀಶಾಂತ್ ವಿರುದ್ಧ ನಿಷೇಧ ತೆರವಿಗೆ ಕೆಸಿಎನಿಂದ ಬಿಸಿಸಿಐಗೆ ಪತ್ರ

Webdunia
ಸೋಮವಾರ, 27 ಜುಲೈ 2015 (13:58 IST)
ಕೇರಳ ಕ್ರಿಕೆಟ್ ಸಂಸ್ಥೆ ಮಾಜಿ ವೇಗಿ ಎಸ್.ಶ್ರೀಶಾಂತ್ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವು ಮಾಡಬೇಕೆಂದು ಬಿಸಿಸಿಐಗೆ ಪತ್ರ ಬರೆಯಲಿದೆ. ದೆಹಲಿ ಹೈಕೋರ್ಟ್ ವೇಗಿ ಶ್ರೀಶಾಂತ್ ವಿರುದ್ಧ ಆರೋಪಗಳನ್ನುಕೈಬಿಟ್ಟು ದೋಷಮುಕ್ತಗೊಳಿಸಿದ ಬಳಿಕ  ಬಿಸಿಸಿಐ ಉಪಾಧ್ಯಕ್ಷರೂ ಕೂಡ ಆಗಿರುವ ಕೆಸಿಎ ಅಧ್ಯಕ್ಷ ಟಿ.ಸಿ ಮ್ಯಾಥೀವ್ ಮಂಡಳಿಗೆ ಪತ್ರ ಬರೆಯಲಿದ್ದಾರೆ. 
 
ನಾವು ನಿಷೇಧವನ್ನು ತೆರವು ಮಾಡಲು ಬಿಸಿಸಿಐಗೆ ಮನವಿ ಸಲ್ಲಿಸಲಿದ್ದೇವೆ. ಕೋರ್ಟ್ ಶ್ರೀಶಾಂತ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ನಾವು ಬಿಸಿಸಿಐಗೆ ಬರೆಯಲಿದ್ದೇವೆ ಎಂದು ಕೆಸಿಎ ಕಾರ್ಯದರ್ಶಿ ಟಿ.ಎನ್. ಅನಂತನಾರಾಯಣ್ ತಿಳಿಸಿದರು.
 
ಶ್ರೀಶಾಂತ್ ವಿರುದ್ಧ ನಿಷೇಧವನ್ನು ತೆರವು ಮಾಡಬೇಕೆಂದು ಪತ್ರ ಬರೆದ ಬಳಿಕ ಬಿಸಿಸಿಐನಿಂದ ಪ್ರತಿಕ್ರಿಯೆಗೆ ಕೆಸಿಎಗೆ ಕಾಯುವುದಾಗಿ ಪ್ರಸಕ್ತ ಬೆಂಗಳೂರಿನಲ್ಲಿರುವ ಮ್ಯಾಥೀವ್ ಹೇಳಿದ್ದಾರೆ. ಕೆಸಿಎ ಪದಾಧಿಕಾರಿಗಳ ನಿಯೋಗವು ಬಿಸಿಸಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಕೆಸಿಎ ಅಧಿಕಾರಿಗಳು ತಿಳಿಸಿದ್ದಾರೆ.  ಕೋರ್ಟ್ ತೀರ್ಪಿನ ಬಳಿಕ , ಮೂವರು ಕ್ರಿಕೆಟಿಗರ ವಿರುದ್ಧ ನಿಷೇಧವನ್ನು ಸದ್ಯಕ್ಕೆ ತೆಗೆಯುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments