Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇಂದು ಅಸ್ಸಾಂ ಸವಾಲು

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇಂದು ಅಸ್ಸಾಂ ಸವಾಲು
Mumbai , ಗುರುವಾರ, 27 ಅಕ್ಟೋಬರ್ 2016 (08:55 IST)
ಮುಂಬೈ: ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಇಂದು ಕರ್ನಾಟಕ ತಂಡ ಅಸ್ಸಾಂ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ದೆಹಲಿ ತಂಡವನ್ನು ಭಾರೀ ಅಂತರದಿಂದ ಸೋಲಿಸಿದ್ದ ಕರ್ನಾಟಕ ಆತ್ಮವಿಶ್ವಾಸದಲ್ಲಿದೆ.

ಕರ್ನಾಟಕಕ್ಕೆ ನಾಯಕ ವಿನಯ್ ಕುಮಾರ್ ಗಾಯಾಳುವಾಗಿರುವುದರಿಂದ ಈ ಪಂದ್ಯದಲ್ಲೂ ಕರಣ್ ನಾಯರ್ ನೇತೃತ್ವ ವಹಿಸಲಿದ್ದಾರೆ. ವಿಶೇಷ ಎಂದರೆ ಎದುರಾಳಿ ಅಸ್ಸಾಂ ತಂಡದ ಕೋಚ್ ಕರ್ನಾಟಕದವರೇ ಆದ ಸುನಿಲ್ ಜೋಶಿ.

ಅಸ್ಸಾಂ ಈಗಾಗಲೇ ಎರಡು ಪಂದ್ಯಗಳನ್ನು ಸೋತಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿದೆ. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಅದರ ಬೌಲರ್ ಗಳೇ ಶಕ್ತಿ. ಕಳೆದ ಪಂದ್ಯದಲ್ಲಿ ವಿನಯ್ ಕುಮಾರ್ ಅನುಪಸ್ಥಿತಿಯ ಹೊರತಾಗಿಯೂ ವೇಗದ ಬೌಲರ್ ಗಳು ಅದ್ಭುತ ಪ್ರದರ್ಶನವನ್ನೇ ನೀಡಿದ್ದರು. ಹೀಗಾಗಿ ಸೋಲಿನ ನಿರಾಸೆಯಲ್ಲಿರುವ ಅಸ್ಸಾಂ ಮೇಲೆ ಪ್ರಹಾರ ನಡೆಸುವ ಹುಮ್ಮನಸ್ಸಿನಲ್ಲಿ ನಮ್ಮ ಬೌಲರ್ ಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ತವರಲ್ಲೇ ಸೋತ ಭಾರತ