Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿಯಿಂದ ನಿರ್ಗಮಿಸಿದ ಕರ್ನಾಟಕ: ಮಹಾರಾಷ್ಟ್ರ ವಿರುದ್ಧ ಸೋಲು

ರಣಜಿ ಟ್ರೋಫಿಯಿಂದ ನಿರ್ಗಮಿಸಿದ ಕರ್ನಾಟಕ: ಮಹಾರಾಷ್ಟ್ರ ವಿರುದ್ಧ ಸೋಲು
ಪುಣೆ , ಶುಕ್ರವಾರ, 4 ಡಿಸೆಂಬರ್ 2015 (16:21 IST)
ಸತತವಾಗಿ ಎರಡು ವರ್ಷಗಳ ಕಾಲ ರಣಜಿಟ್ರೋಫಿ ಪ್ರಶಸ್ತಿಯನ್ನು ಎತ್ತಿಹಿಡಿದು ಹ್ಯಾಟ್ರಿಕ್ ಸಾಧನೆ ಮಾಡುವ ಕನಸು ಕಂಡಿದ್ದ ಕರ್ನಾಟಕಕ್ಕೆ  ಮುಖಭಂಗವಾಗಿದೆ.  ಕರ್ನಾಟಕ ತಂಡ ಪುಣೆಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 53 ರನ್‌ಗಳಿಂದ ಸೋತು ರಣಜಿ ಟ್ರೋಫಿಯಿಂದ ನಿರ್ಗಮಿಸಿದೆ.

ಪ್ರಥಮ ಇನ್ನಿಂಗ್ಸ್ನಲ್ಲಿ   ಮಹಾರಾಷ್ಟ್ರ 212,  ಕರ್ನಾಟಕ 180,  ದ್ವಿತೀಯ ಇನ್ನಿಂಗ್ಸ್‌ನಲ್ಲಿ  ಮಹಾರಾಷ್ಟ್ರ 260, ಕರ್ನಾಟಕ 239 ರನ್‌ಗೆ ಆಲೌಟಾಗಿದ್ದರಿಂದ ಕರ್ನಾಟಕ  52 ರನ್‌ಗಳಿಂದ ಸೋತು ರಣಜಿ ಟ್ರೋಫಿಯಿಂದ ಲೀಗ್ ಹಂತದಲ್ಲೇ ನಿರ್ಗಮಿಸಿದೆ.

 ಕರ್ನಾಟಕದ ಪರ ಏಕಾಂಗಿಯಾಗಿ ಹೋರಾಟ ಮಾಡಿದ ಸಿ.ಎಂ. ಗೌತಮ್ 69 ರನ್ ಗಳಿಸಿ ಔಟಾಗದೇ ಉಳಿದರು.  ರಾಬಿನ್ ಉತ್ತಪ್ಪಾ ಅವರು 61 ರನ್ ಗಳಿಸಿದರು. ಅವರ ಸ್ಕೋರಿನಲ್ಲಿ 6 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳಿತ್ತು. ಬಲಗೈ ಮೀಡಿಯಂ ವೇಗದ ಬೌಲರ್ ನಿಕ್ತಿ ಧುಮಾಲ್ ಅವರು 25 ಓವರುಗಳಲ್ಲಿ 78 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಶ್ರೇಷ್ಟ ಬೌಲಿಂಗ್ ದಾಳಿ ಮಾಡಿದರು.  ಬಲಗೈ ಮೀಡಿಯಂ ಫಾಸ್ಟ್ ಬೌಲರ್ ಅನುಮಪ್ ಸಂಕ್ಲೇಚಾ  20 ಓವರುಗಳಲ್ಲಿ 4 ವಿಕೆಟ್ ಕಬಳಿಸಿದರು. 

Share this Story:

Follow Webdunia kannada