Webdunia - Bharat's app for daily news and videos

Install App

IPL 2025: ಆರ್ ಸಿಬಿಯಲ್ಲಿ ಈ ಬಾರಿ ಈ ಸಲ ಕಪ್ ನಮ್ದೇ ಘೋಷಣೆ ಕೇಳಿಸಲ್ಲ: ಎಲ್ಲದಕ್ಕೂ ಕೊಹ್ಲಿಯೇ ಕಾರಣ

Krishnaveni K
ಬುಧವಾರ, 19 ಮಾರ್ಚ್ 2025 (12:28 IST)
ಬೆಂಗಳೂರು: ಪ್ರತೀ ಬಾರಿ ಐಪಿಎಲ್ ಟೂರ್ನಿಯಲ್ಲೂ, ಆಟಗಾರರು ಎಲ್ಲೇ ಹೋದರೂ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ಘೋಷ ವಾಕ್ಯದೊಂದಿಗೇ ಟೂರ್ನಿ ಆರಂಭಿಸುತ್ತಾರೆ. ಆದರೆ ಈ ಬಾರಿ ಈ ಸಲ ಕಪ್ ನಮ್ದೇ ಘೋಷಣೆ ಕೇಳಲ್ಲ. ಎಲ್ಲದಕ್ಕೂ ಕೊಹ್ಲಿಯೇ ಕಾರಣ ಎನ್ನಬಹುದು.

ಈ ಸಲ ಕಪ್ ನಮ್ದೇ ಎಂದು 17 ಸೀಸನ್ ಮುಗಿದೇ ಹೋಗಿದೆ. ಇದುವರೆಗೆ ಆರ್ ಸಿಬಿಗೆ ಕಪ್ ಗೆಲ್ಲಲು ಸಾಧ್ಯವೇ ಆಗಿಲ್ಲ. ಆರ್ ಸಿಬಿಗೆ ಒಂದಾದರೂ ಕಪ್ ಗೆಲ್ಲಿಸಿಕೊಡಬೇಕು ಎಂದು ಕೊಹ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಇದುವರೆಗೆ ಸಾಧ್ಯವಾಗಿಲ್ಲ ಎಂಬ ಬೇಸರ ಅವರಲ್ಲಿದೆ.

ಈ ಸಾರಿಯಾದರೂ ಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಈ ಬಾರಿ ಹೊಸ ನಾಯಕತ್ವದಲ್ಲಿ, ಆಲ್ ರೌಂಡರ್ ಗಳ ಪಡೆಯೇ ಕಟ್ಟಿಕೊಂಡು ಆರ್ ಸಿಬಿ ಕಪ್ ಗೆಲ್ಲಬಹುದು ಎಂಬ ವಿಶ್ವಾಸವಿದೆ. ಆದರೆ ಎಲ್ಲೂ ಈ ಸಲ ಕಪ್ ನಮ್ದೇ ಎಂಬ ಹೇಳಿಕೆ ನೀಡದಂತೆ ಕೊಹ್ಲಿ ಹೇಳಿದರಂತೆ.

ಈ ಸಲ ಯಾರೂ ಈ ಸಲ ಕಪ್ ನಮ್ದೇ ಎಂದು ಬಳಸಬಾರದು ಎಂದು ಎಬಿಡಿ ವಿಲಿಯರ್ಸ್ ಬಳಿ ಕಟ್ಟುನಿಟ್ಟಾಗಿ ಕೊಹ್ಲಿ ಹೇಳಿದ್ದಾರಂತೆ. ಹೀಗಾಗಿ ಈ ಬಾರಿ ಎಲ್ಲೂ ಈ ಸಲ ಕಪ್ ನಮ್ದೇ ಎಂಬ ಮಾತು ಕೇಳಿಬರುತ್ತಿಲ್ಲ. ಈ ಬಾರಿ ಹೇಳದೇ ಕಪ್ ಹೊಡೆಯಲು ಕೊಹ್ಲಿ ಪ್ಲ್ಯಾನ್ ಮಾಡಿರಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌

ಮುಂದಿನ ಸುದ್ದಿ
Show comments