Webdunia - Bharat's app for daily news and videos

Install App

ಕಿರು ಸರಣಿಗಾಗಿ ಜಿಂಬಾಬ್ವೆಗೆ ಆಗಮಿಸಿದ ಭಾರತ ತಂಡ

Webdunia
ಶುಕ್ರವಾರ, 10 ಜೂನ್ 2016 (12:41 IST)
ನಾಯಕ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ 16 ಆಟಗಾರರ ಭಾರತ ಕ್ರಿಕೆಟ್ ತಂಡವು ಶನಿವಾರದಿಂದ ಆರಂಭವಾಗುವ ಕಿರು ಸೀಮಿತ ಓವರುಗಳ ಸರಣಿಯಲ್ಲಿ  ಆಡುವುದಕ್ಕೆ ಇಲ್ಲಿಗೆ ಆಗಮಿಸಿದೆ. ಮಂಗಳವಾರ ಮುಂಬೈಯನ್ನು ಬಿಟ್ಟಿದ್ದ ತಂಡ ಸುದೀರ್ಘ ಅವಧಿಯ ಪ್ರಯಾಣದ ಬಳಿಕ ಇಲ್ಲಿಗೆ ಬಂದು ತಲುಪಿದೆ.

ಹರಾರೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಆಟಗಾರರ ಆಗಮನವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು ಧೋನಿ ಮತ್ತು ಅವರ ತಂಡ ವಿಮಾನನಿಲ್ದಾಣದಲ್ಲಿ ವಿಧಿವಿಧಾನಗಳನ್ನು ಪೂರೈಸುವ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ತಂಡವು ಜಿಂಬಾಬ್ವೆ ವಿರುದ್ಧ ಜೂನ್ 11 ಮತ್ತು 22ರ ನಡುವೆ  ಮೂರು ಏಕದಿನ ಪಂದ್ಯಗಳನ್ನು ಮತ್ತು ಅಷ್ಟೇ ಸಂಖ್ಯೆಯ ಟಿ 20 ಪಂದ್ಯಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳನ್ನು ಹರಾರೆ ಕ್ರೀಡಾ ಕ್ಲಬ್‌ನಲ್ಲಿ ಆಡಿಸುವುದಕ್ಕೆ ನಿಗದಿಯಾಗಿದೆ.

ಏಕದಿನ ಪಂದ್ಯಗಳನ್ನು ಜೂನ್ 11, 13 ಮತ್ತು 15ರಂದು ಆಡಲಾಗುತ್ತದೆ ಮತ್ತು ಟಿ 20 ಪಂದ್ಯಗಳನ್ನು ಜೂನ್ 18, 20 ಮತ್ತು 22ರಂದು ಆಡಲಾಗುತ್ತದೆ.  ಹೊಸ ನೋಟದ ಭಾರತ ತಂಡವು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರವಿಚಂದ್ರನ್ ಅಶ್ವಿನ್ ಮುಂತಾದ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಹರಾರೆಗೆ ಆಗಮಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲೈಂಗಿಕ ಕಿರುಕುಳ ಪ್ರಕರಣ: ಆರ್‌ಸಿಬಿ ಆಟಗಾರ ಯಶ್ ದಯಾಳ್‌ಗೆ ತಾತ್ಕಾಲಿಕ ರಿಲೀಫ್‌

WI vs AUS: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಔಟಾದ ವೆಸ್ಟ್ ಇಂಡೀಸ್

IND vs ENG: ಟೀಂ ಇಂಡಿಯಾ ಸೋಲಿಗೆ ಈ ಮೂವರು ಆಟಗಾರರೇ ಕಾರಣ

ಭುಜಬಲದ ಪರಾಕ್ರಮ ಮೆರೆದ ಮೊಹಮ್ಮದ್‌ ಸಿರಾಜ್‌ಗೆ ಐಸಿಸಿ ಶಾಕ್‌: ನಿಷೇಧದ ಭೀತಿಯಲ್ಲಿ ಭಾರತದ ವೇಗಿ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು

ಮುಂದಿನ ಸುದ್ದಿ
Show comments