Webdunia - Bharat's app for daily news and videos

Install App

ನಿದ್ರೆರಹಿತ ರಾತ್ರಿಯನ್ನು ಕಳೆದ ಮಂದೀಪ್ ಮೈದಾನಕ್ಕಿಳಿದಾಗ ಒತ್ತಡವೆಲ್ಲಾ ಮಾಯ

Webdunia
ಮಂಗಳವಾರ, 21 ಜೂನ್ 2016 (18:28 IST)
ಎರಡನೇ ಟಿ 20ಯಲ್ಲಿ ತಂಡದ ಸರಣಿ ಡ್ರಾದ ಗೆಲುವಿನಲ್ಲಿ ಅರ್ಧಶತಕ ಬಾರಿಸಿದ ಮಂದೀಪ್ ಸಿಂಗ್ ತಾವು ಒತ್ತಡದಿಂದಾಗಿ ಪಂದ್ಯದ ಹಿಂದಿನ ದಿನ ನಿದ್ರೆ ರಹಿತ ರಾತ್ರಿಗಳನ್ನು ಕಳೆದಿದ್ದಾಗಿ ಹೇಳಿದ್ದು, ತಾವು ಮೈದಾನಕ್ಕೆ ಇಳಿದ ಕ್ಷಣವೇ ಆ ಒತ್ತಡ ಮಾಯವಾಯಿತು ಎಂದಿದ್ದಾರೆ. 
 
ಸಾಧಾರಣ ಮೊತ್ತ 100 ರನ್ ಚೇಸ್‌ನಲ್ಲಿ ಅಜೇಯ 52 ರನ್ ಗಳಿಸಿದ ಮಂದೀಪ್, ತಾವು ಪಂದ್ಯಕ್ಕೆ ಮುಂಚೆ ಅನುಭವಿಸಿದ ಆತಂಕವು ಬ್ಯಾಟಿಂಗ್‌ಗಿಳಿದಾಗ ಅಚ್ಚರಿಯಂತೆ ಮಾಯವಾಯಿತು ಎಂದರು.  ಆಯ್ಕೆದಾರರು ನಮ್ಮನ್ನು ಗಮನಿಸುವುದರಿಂದ ಮತ್ತು ಪಂದ್ಯ ಗೆಲ್ಲುವ ಒತ್ತಡವು ನಿದ್ರೆರಹಿತ ರಾತ್ರಿ ಕಳೆಯುವಂತೆ ಮಾಡಿತು. ಅದು ಒತ್ತಡ ಅಥವಾ ಆತಂಕವಾಗಿರಲಿ, ಬ್ಯಾಟಿಂಗ್‌ಗೆ ಇಳಿದಾಗ ಸುಲಭವಾಗಿ ಮಾಯವಾಯಿತು ಎಂದಿದ್ದಾರೆ. 
 
 ಹಿಂದಿನ ಪಂದ್ಯದಲ್ಲಿ ಸೋತಿದ್ದು ಮನಸ್ಸಿಗೆ ನೋವಾಗಿತ್ತು. ನಾವು ಕೆಲವು ಅಂಶಗಳನ್ನು ಚರ್ಚಿಸಿ ನಾವು ಚರ್ಚಿಸಿದ ಅಂಶಗಳನ್ನು ಜಾರಿಗೆ ತಂದೆವು ಎಂದು ಸಂದೀಪ್ ಹೇಳಿದರು. ಭಾರತದ ಆಟಗಾರರು ಹೆಚ್ಚುವರಿ ಒತ್ತಡ ಹಾಕಿಕೊಳ್ಳುವ ಬದಲಿಗೆ ಎರಡನೇ ಟಿ 20 ಹಿನ್ನೆಲೆಯಲ್ಲಿ ರಿಲ್ಯಾಕ್ಸ್ ಆಗಿರಲು ಬಯಸಿದ್ದರು ಎಂದು ಮಂದೀಪ್ ಬಹಿರಂಗ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಮುಂದಿನ ಸುದ್ದಿ
Show comments