Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಅದೃಷ್ಟ ಬದಲಾಯಿಸಲು ಹರ್ಭಜನ್ ಆಸಕ್ತಿ

ಟೀಂ ಇಂಡಿಯಾ ಅದೃಷ್ಟ ಬದಲಾಯಿಸಲು ಹರ್ಭಜನ್ ಆಸಕ್ತಿ
ಕೊಲ್ಕತ್ತಾ , ಗುರುವಾರ, 8 ಅಕ್ಟೋಬರ್ 2015 (14:37 IST)
ದಕ್ಷಿಣ ಆಫ್ರಿಕಾಗೆ ಟಿ20 ಸರಣಿಯಲ್ಲಿ ಭಾರತ ಸೋಲನುಭವಿಸಿರಬಹುದು. ಆದರೆ ಭಾರತದ ಪ್ರಮುಖ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ತಂಡವನ್ನು ಅಷ್ಟು ಬೇಗ ಕಡೆಗಣಿಸಲಾಗುವುದಿಲ್ಲ ಎಂದು ಹೇಳಿದ್ದು, ಕೊನೆಯ ಮತ್ತು ಅಂತಿಮ ಪಂದ್ಯದಲ್ಲಿ ಅದೃಷ್ಟ ಬದಲಾಯಿಸಲು ಆತಿಥೇಯರು ಆಸಕ್ತರಾಗಿರುವುದಾಗಿ ತಿಳಿಸಿದ್ದಾರೆ.  ನಾವು ಸರಣಿ ಸೋತಿದ್ದೇವೆ. ಆದರೆ ಅಂತಿಮ ಪಂದ್ಯದಲ್ಲಿ ಆಡುವುದು ಬೇಕಾದಷ್ಟಿದೆ. ನಾವು ಕೊನೆಯ ಪಂದ್ಯದಲ್ಲಿ ಗೆಲ್ಲುತ್ತೇವೆಂಬ ಆಶಾವಾದ ಹೊಂದಿದ್ದು, ಆಗಿನಿಂದ ಕಥೆ ಬೇರೆಯದಾಗಿರುತ್ತದೆ ಎಂದು ಹರ್ಬಜನ್ ವರದಿಗಾರರಿಗೆ ತಿಳಿಸಿದರು. 
 
 ಏಕದಿನ ಪಂದ್ಯಗಳು ಎದುರಾಗಿದ್ದು, ನಂತರ ಟೆಸ್ಟ್‌ಗಳು ಬರುತ್ತವೆ. ನಾವು ಅತ್ಯುತ್ತಮ ಆಟವನ್ನು ಆಡಲು ಬಯಸಿದ್ದು,  ನಾವು ಒಂದೊಮ್ಮೆ ಗೆಲ್ಲುವುದಕ್ಕೆ ಆರಂಭಿಸಿದರೆ ನಮ್ಮನ್ನು ಸೋಲಿಸುವುದು ಕಷ್ಟ ಎಂದು ಹರ್ಭಜನ್ ಹೇಳಿದರು. ಟಿ 20 ಸರಣಿಯ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ಐದು ಏಕದಿನ ಪಂದ್ಯಗಳು ಅದರ ಬೆನ್ನಹಿಂದೆ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
 
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಸೋತರೂ ಪುಟಿದೆದ್ದು ಸರಣಿ ಗೆದ್ದಿರುವುದನ್ನು ಉದಾಹರಿಸಿ, ನಮಗಿರುವ ನಂಬಿಕೆಯಿಂದ ನಾವು ಗೆಲುವು ಗಳಿಸಿದ್ದೇವೆ ಎಂದು ಹರ್ಭಜನ್ ಹೇಳಿದರು. 
 

Share this Story:

Follow Webdunia kannada