Select Your Language

Notifications

webdunia
webdunia
webdunia
webdunia

ಗೌರವ ಉಳಿಸಿಕೊಳ್ಳಲು ಭಾರತ ಕೊನೆಯ ಟಿ 20 ಗೆಲ್ಲಲೇಬೇಕು

ಗೌರವ  ಉಳಿಸಿಕೊಳ್ಳಲು ಭಾರತ ಕೊನೆಯ ಟಿ 20 ಗೆಲ್ಲಲೇಬೇಕು
ಕೊಲ್ಕತಾ , ಗುರುವಾರ, 8 ಅಕ್ಟೋಬರ್ 2015 (14:57 IST)
ಕೊಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗೌರವ ಉಳಿಸಿಕೊಳ್ಳುವುದಕ್ಕಾಗಿ ಸಮಾಧಾನದ ಗೆಲುವು ಗಳಿಸಬೇಕಿದ್ದು, ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಈ ಪಂದ್ಯದಲ್ಲಿ ದಾಖಲೆಗಳ ಮೇಲೆ ಕಣ್ಣಿರಿಸಿದ್ದಾರೆ. 

2-0ಯಿಂದ ಸರಣಿ ಸೋತಿರುವ ಭಾರತ 11 ಮಂದಿಯ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದು, ಕೊಹ್ಲಿ,  ರೈನಾ ಮತ್ತು ಅಶ್ವಿನ್ ಅವರು ಆಡುವರೆಂದು ನಿರೀಕ್ಷಿಸಲಾಗಿದೆ.  ಆತಿಥೇಯರು ಕಾನ್ಪುರದಲ್ಲಿ ಅಕ್ಟೋಬರ್ 11ರಿಂದ ನಡೆಯುವ ಏಕದಿನ ಪಂದ್ಯದಲ್ಲಿ ಸಮಾಧಾನಕರ ಗೆಲುವನ್ನು ಗಳಿಸಲು ಎದುರುನೋಡುತ್ತಿದ್ದಾರೆ. 
 
 ಈ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿದರೆ 10 ಟ್ವೆಂಟಿ 20 ಅರ್ಧಶತಕಗಳನ್ನು ಸ್ಕೋರ್ ಮಾಡಿದ ಹಿರಿಮೆಗೆ ಪಾತ್ರರಾಗುತ್ತಾರೆ.  ರೈನಾ ಅವರು 1000 
ಟಿ 20 ರನ್‌ಗಳಿಗೆ 17 ರನ್ ಮಾತ್ರ ಕೊರತೆ ಎದುರಿಸಿದ್ದಾರೆ. ಅಶ್ವಿನ್ ಅವರಿಗೆ ಟಿ20ಯಲ್ಲಿ 30 ವಿಕೆಟ್ ಗಳಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೇವಲ ಒಂದು ವಿಕೆಟ್ ಅಗತ್ಯವಿದೆ. 
 

Share this Story:

Follow Webdunia kannada