Webdunia - Bharat's app for daily news and videos

Install App

ಭಾರತ-ಬಾಂಗ್ಲಾ ಟೆಸ್ಟ್ ಕ್ರಿಕೆಟ್: ಇಬ್ಬರೂ ಬ್ಯಾಟ್ಸ್ ಮನ್ ಗಳು ಒಂದೇ ತುದಿಯಲ್ಲಿ ಆದರೂ ನಾಟೌಟ್!

Webdunia
ಗುರುವಾರ, 9 ಫೆಬ್ರವರಿ 2017 (11:42 IST)
ಹೈದರಾಬಾದ್: ಇದು ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನದ ಆಟದ ವೇಳೆ ನಡೆದ ಡ್ರಾಮಾ. ಬಾಂಗ್ಲಾ ದುರ್ಬಲ ತಂಡ ಎನ್ನುವುದೇನೋ ಗೊತ್ತು, ಆದರೆ ಇಬ್ಬರೂ ಬ್ಯಾಟ್ಸ್ ಮನ್ ಗಳು ಒಂದೇ ತುದಿಯಲ್ಲಿದ್ದರೂ ಔಟ್ ಮಾಡಲಾಗದಷ್ಟಾ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಯಿತು.

 
ಇದು ನಡೆದಿದ್ದ 19 ನೇ ಓವರ್ ನಲ್ಲಿ. ಬಾಂಗ್ಲಾ ಬೌಲರ್ ಮೆಹದಿ ಹಸನ್ ಬೌಲಿಂಗ್ ನಲ್ಲಿ ಚೇತೇಶ್ವರ ಪೂಜಾರ ಮಿಡ್ ಆಫ್ ಕಡೆಗೆ ತಳ್ಳಿ ಸಿಂಗಲ್ ಕದಿಯಲು ಹೊರಟಿದ್ದು. ಅತ್ತ ಮುರಳಿ ವಿಜಯ್ ಪಿಚ್ ನ ಅರ್ಧ ಭಾಗಕ್ಕೆ ತಲುಪಿದ್ದರು. ಆದರೆ ಚೆಂಡು ಫೀಲ್ಡರ್ ಕೈಯಲ್ಲಿರುವುದು ನೋಡಿ ಪೂಜಾರ ವಾಪಸ್ ಕ್ರೀಸ್ ಗೆ ಮರಳಲು ನೋಡಿದರೆ ವಿಜಯ್ ಕೂಡಾ ಒಂದೇ ತುದಿಯಲ್ಲಿರುವುದು ತಿಳಿಯಿತು.

ಅಪಾಯದ ಅರಿವಾದ ತಕ್ಷಣ ನಾನ್ ಸ್ಟ್ರೈಕರ್ ಎಂಡ್ ಗೆ ವಿಜಯ್ ಓಡಿದರೂ, ಫೀಲ್ಡರ್ ಗೆ ವಿಕೆಟ್ ಗೆ ಬಾಲ್ ತಾಗಿಸಲು ಬೇಕಾದಷ್ಟು ಸಮಯವಿತ್ತು. ಆದರೂ, ಹಸನ್ ತಪ್ಪು ಮಾಡಿದರು. ಸರಿಯಾಗಿ ಬಾಲ್ ಹಿಡಿಯದೆ, ವಿಕೆಟ್ ಗೂ ಬಾಲ್ ತಾಕಿಸದೆ ರನೌಟ್ ಚಾನ್ಸ್ ಮಿಸ್ ಮಾಡಿದರು. ಹಿಂದೊಮ್ಮೆ ಇದೇ ಬಾಂಗ್ಲಾದೇಶದ ವಿರುದ್ಧ ಸಚಿನ್ ತೆಂಡುಲ್ಕರ್ ಮತ್ತು ಅನಿಲ್ ಕುಂಬ್ಳೆ ಕೂಡಾ ಹೀಗೇ ಎಡವಟ್ಟು ಮಾಡಿಕೊಂಡು ಬಚವಾಗಿದ್ದರು.

ದಿನದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮತ್ತೊಂದು ಆಘಾತ ನೀಡುವ ಅವಕಾಶವನ್ನು ಬಾಂಗ್ಲಾ ಕೈ ಚೆಲ್ಲಿತು. ಇದನ್ನು ಹೊರತುಪಡಿಸಿದರೆ ಬಾಂಗ್ಲಾ ಬೌಲರ್ ಗಳು ಭಾರತೀಯ ಬ್ಯಾಟ್ಸ್ ಮನ್ ಗಳ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ. ಆರಂಭದ 10 ಓವರ್ ಗಳಲ್ಲಿ ವೇಗಿಗಳು ಕೊಂಚ ಪರಿಣಾಮ ಬೀರಿದರು. ಆದರೆ ಬಿಸಿಲು ಏರುತ್ತಿದ್ದಂತೆ ಪೂಜಾರ ಮತ್ತು ವಿಜಯ್ ತಮ್ಮ ಮೆಚ್ಚಿನ ಶಾಟ್ ಹೊಡೆದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ಏಕಮಾತ್ರ ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ವಿಜಯ್ 45 ರನ್ ಗಳಿಸಿ ಅರ್ಧಶತಕಕ್ಕೆ ಹತ್ತಿರವಾಗಿದ್ದರೆ, ಪೂಜಾರ 39 ರನ್ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲೇ ಶುಭಮನ್‌ ಗಿಲ್‌ ಸ್ಮರಣೀಯ ಶತಕ: ದಿಗ್ಗಜರ ಸಾಲಿಗೆ ಯುವ ನಾಯಕ

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಮುಂದಿನ ಸುದ್ದಿ
Show comments