Webdunia - Bharat's app for daily news and videos

Install App

IND vs ENG test: ಸೂಕ್ತ ಸಮಯದಲ್ಲಿ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ

Krishnaveni K
ಸೋಮವಾರ, 5 ಫೆಬ್ರವರಿ 2024 (11:40 IST)
Photo Courtesy: Twitter
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಇಂದು ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.

ಭಾರತ ನೀಡಿರುವ 399 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಿನ್ನೆಯ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿ ದಿನದಾಟ ಮುಗಿಸಿತ್ತು. ನಿನ್ನೆ ಅಜೇಯರಾಗಿದ್ದ ಆರಂಭಿಕ ಕ್ರಾವ್ಲೇ ಇಂದು ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ 73 ರನ್ ಗಳಿಸಿದ್ದಾಗ ಕ್ರಾವ್ಲೇ ವಿಕೆಟ್ ನ್ನು ಕುಲದೀಪ್ ಯಾದವ್ ಬಲಿ ಪಡೆದರು. ಕ್ರಾವ್ಲೇ ಬ್ಯಾಟಿಂಗ್ ನೋಡುತ್ತಿದ್ದರೆ ಕಳೆದ ಪಂದ್ಯದಲ್ಲಿ ಒಲಿ ಪಾಪ್ ಬ್ಯಾಟಿಂಗ್ ನೆನಪಾಗಿದ್ದಂತೂ ನಿಜ. ಕಳೆದ ಪಂದ್ಯದಲ್ಲೂ ಟೀಂ ಇಂಡಿಯಾ ಇದೇ ಸ್ಥಿತಿಯಲ್ಲಿತ್ತು. ಆದರೆ ಒಲಿ ಪಾಪ್ ಏಕಾಂಗಿಯಾಗಿ ಆಡಿ ಪಂದ್ಯ ಕಸಿದುಕೊಂಡಿದ್ದರು. ಆದರೆ ಈ ಬಾರಿ ಆ ರೀತಿ ಆಗಲು ಟೀಂ ಇಂಡಿಯಾ ಬೌಲರ ಗಳು ಬಿಟ್ಟಿಲ್ಲ. ಕ್ರಾವ್ಲೇ ವಿಕೆಟ್ ಪಡೆದು ಇಂಗ್ಲೆಂಡ್ ಗೆ ತಕ್ಕ ಆಘಾತವಿಕ್ಕಿದರು.

ಕಳೆದ ಪಂದ್ಯದ ಹೀರೋ ಒಲಿ ಪಾಪ್ ರನ್ನು 23 ರನ್ ಗಳಿಸಿದ್ದಾಗ ಅಶ್ವಿನ್ ಪೆವಿಲಿಯನ್ ಗಟ್ಟಿದರು. ನಿನ್ನೆ ಅಜೇಯರಾಗುಳಿದಿದ್ದ ನೈಟ್ ವಾಚ್ ಮನ್ ರೆಹಾನ್ ಅಹ್ಮದ್ 23 ರನ್ ಗಳಿಸಿ ಔಟಾದರು. ಇದೀಗ ಭೋಜನ ವಿರಾಮಕ್ಕೆ ಮೊದಲು ಕೊನೆಯ ಎಸೆತದಲ್ಲಿ ಜಾನಿ ಬೇರ್ ಸ್ಟೋ 26 ರನ್ ಗಳಿಸಿ ಔಟಾಗುವ ಮೂಲಕ ಇಂಗ್ಲೆಂಡ್ ಸಂಕಷ್ಟಕ್ಕೀಡಾಗಿದೆ. ಇದೀಗ ಕ್ರೀಸ್ ನಲ್ಲಿ ನಾಯಕ ಬೆನ್ ಸ್ಟೋಕ್ ಖಾತೆ ತೆರೆಯದೇ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇಂಗ್ಲೆಂಡ್ ಗೆಲುವಿಗಾಗಿ ಇನ್ನೂ 205 ರನ್ ಗಳಿಸಬೇಕಿದೆ. ಆದರೆ ಯಾವುದೂ ಅಸಾಧ‍್ಯವಲ್ಲ. ಹೀಗಾಗಿ ಭೋಜನ ವಿರಾಮದ ಬಳಿಕ ಟೀಂ ಇಂಡಿಯಾ ಸಾಧ‍್ಯವಾದಷ್ಟು ಬೇಗ ಬೆನ್ ಸ್ಟೋಕ್ಸ್ ವಿಕೆಟ್ ಪಡೆಯಬೇಕಿದೆ. ಕಳೆದ ಇನಿಂಗ್ಸ್ ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಸ್ಪಿನ್ನರ್ ಅಶ್ವಿನ್ ಇದುವರೆಗೆ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಉಳಿದಂತೆ ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs PBKS Match: ಪಡಿಕ್ಕಲ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌, ಕರೆತಂದ ಗುಟ್ಟು ಬಿಚ್ಚಿಟ್ಟ ಮೆಂಟರ್‌ ದಿನೇಶ್ ಕಾರ್ತಿಕ್

IPL 2025: ಸಮಾರೋಪ ಸಮಾರಂಭಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ

IPL 2025: ಫೈನಲ್‌ಗೆ ಲಗ್ಗೆಯಿಟ್ಟರೂ ಖುಷಿ ಕಾಣದ ಶ್ರೇಯಸ್ ಅಯ್ಯರ್, ಕಾರಣ ಇಲ್ಲಿದೆ

Norway Chess 2025 ಗುಕೇಶ್ ವಿರುದ್ಧ ಸೋಲು ಅನುಭವಿಸಿದ್ದ ಹಾಗೇ ಕಾರ್ಲ್‌ಸನ್ ಹೀಗ್ಯಾಕೆ ಮಾಡಿದ್ರು

ಸ್ಟಾರ್‌ ಆಲ್‌ರೌಂಡರ್‌ ಏಕದಿನ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಣೆ: ಸ್ವಾರ್ಥಕ್ಕಾಗಿ ಆಡಲ್ಲ ಎಂದಿದ್ಯಾಕೆ

ಮುಂದಿನ ಸುದ್ದಿ
Show comments