Webdunia - Bharat's app for daily news and videos

Install App

ಪ್ರತಿಗಾಮಿ ಮತಾಂಧ ಮೂರ್ಖರನ್ನು ನಿರ್ಲಕ್ಷಿಸಿ: ಮೊಹಮ್ಮದ್‌ ಶಮಿಗೆ ಜಾವೇದ್ ಅಖ್ತರ್ ಬೆಂಬಲ

Sampriya
ಶನಿವಾರ, 8 ಮಾರ್ಚ್ 2025 (19:28 IST)
Photo Courtesy X
ಮುಂಬೈ: ಪವಿತ್ರ ರಂಜಾನ್ ತಿಂಗಳಲ್ಲಿ ಮೊಹಮ್ಮದ್ ಶಮಿ ಅವರು ರೋಜಾ (ಉಪವಾಸ) ಆಚರಿಸದಿರುವುದು ಭಾರೀ ಚರ್ಚೆಗೆ ಕಾರಣವಾಯಿತು. ಈ ಬಗ್ಗೆ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಶಮಿಗೆ ಬೆಂಬಲ ಸೂಚಿಸಿ,  ಪ್ರತಿಗಾಮಿ ಮತಾಂಧ ಮೂರ್ಖರ ಬಗ್ಗೆ ಗಮನ ಹರಿಸಬೇಡಿ ಎಂದು ಕೌಂಟರ್‌ ನೀಡಿದ್ದಾರೆ.

ಮಂಗಳವಾರ ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ರೋಜಾ ಆಚರಣೆ ಮಾಡದೆ ಶಮಿ ಎನರ್ಜಿ ಡ್ರಿಂಕ್ ಸೇವಿಸಿರುವುದಕ್ಕೆ ಪರ ಹಾಗೂ ವಿರೋಧಕ್ಕೆ ಕಾರಣವಾಯಿತು.

ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು, ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಮಾಡದಿರುವ ಶಮಿ ಅವರು ದೇವರ ದೃಷ್ಟಿಯಲ್ಲಿ ಅಪರಾಧಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಈ ಹೇಳಿಕೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಜಾವೇದ್ ಅವರು ಶಮಿ ಅವರೇ ಎಲ್ಲ ನಕಾರಾತ್ಮಕತೆಯನ್ನು ನಿರ್ಲಕ್ಷಿಸಿ, ನಾಳಿನ ಫೈನಲ್ ಪಂದ್ಯಾಟದ ಬಗ್ಗೆ ಯೋಚಿಸಿ ಎಂದಿದ್ದಾರೆ.

ಶಮಿ ಸಾಹೇಬ್ ಅವರೇ, ದುಬೈನ ಸುಡು ಬಿಸಿಲಿನ ಮೈದಾನದಲ್ಲಿ ನೀರು ಕುಡಿದಿರುವ ನಿಮ್ಮ ಬಗ್ಗೆ ಹೇಳಿಕೆ ನೀಡಿದ ಮತಾಂಧ ಮೂರ್ಖರಿಗೆ ಹೆದರಬೇಡಿ. ನೀವು ನಮ್ಮೆಲ್ಲರಿಗೆ ಹೆಮ್ಮೆ ತಂದಿರುವ ಶ್ರೇಷ್ಠ ಭಾರತೀಯ ಆಟಗಾರ.  ನಿಮಗೆ ಮತ್ತು ಇಡೀ ತಂಡಕ್ಕೆ ನನ್ನ ಶುಭಾಶಯಗಳು" ಎಂದು ಅವರು ಹೇಳಿದರು.

ಮಂಗಳವಾರದ ಪಂದ್ಯವನ್ನು ಭಾರತ ಗೆದ್ದು, ಭಾನುವಾರದ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

IPL 2025 RCB vs LSG: ಆರ್ ಸಿಬಿ ವರ್ಸಸ್ ಎಲ್ಎಸ್ ಜಿ ಪಂದ್ಯ ಇಂದು ನಡೆಯುತ್ತಾ

IPL 2025: ಮನೆಗೆ ಹೋಗಿ ಎಂದು ಧರ್ಮಶಾಲಾ ಮೈದಾನದಿಂದ ಪ್ರೇಕ್ಷಕರಿಗೆ ಸೂಚನೆ video

ಮುಂದಿನ ಸುದ್ದಿ
Show comments