Select Your Language

Notifications

webdunia
webdunia
webdunia
webdunia

ಚೆಂಡಿನಾಟಕ್ಕೆ ಮತ್ತೊಂದು ಜೀವ ಬಲಿ

ಚೆಂಡಿನಾಟಕ್ಕೆ ಮತ್ತೊಂದು ಜೀವ ಬಲಿ
ಹೈದರಾಬಾದ್ , ಶನಿವಾರ, 25 ಏಪ್ರಿಲ್ 2015 (09:51 IST)
ಕ್ರಿಕೆಟ್ ಆಟುವಾಗ ಎದೆಗೆ ಚೆಂಡು ಬಡಿದಿದ್ದರಿಂದ 6 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 

ನಗರದ ವನಸ್ಥಲಿಪುರಂನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು ಬ್ಯಾಟಿಂಗ್ ಮಾಡುತ್ತಿದ್ದ 12 ರ ಹರೆಯದ ಬಾಲಕ ಬಾರಿಸಿದ ಚೆಂಡು ನೇರವಾಗಿ ವಂಶಿಕೃಷ್ಣ ಎಂಬ ಬಾಲಕನ ಎದೆಗೆ ಬಡಿದೆ. 
 
ಪಶ್ಚಿಮ ಬಂಗಾಳದ ಉದಯೋನ್ಮುಖ ಕ್ರಿಕೆಟರ್ ಅಂಕಿತ್ ಕೇಸರಿ ಸಾವು ಮನಸ್ಸಿನಿಂದ ಮಾಸುವ ಮುನ್ನವೇ ಈ ಘಟನೆ ನಡೆದಿದೆ. 
 
ಸಹ ಆಟಗಾರ ಬಾರಿಸಿದ ಚೆಂಡು ರಭಸವಾಗಿ ಎದೆಗೆ ಬಡಿದು ತಕ್ಷಣ ನೆಲಕ್ಕುರುಳಿದ ವಂಶಿಕೃಷ್ಣನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಕೆಲವೇ ಗಂಟೆಗಳಲ್ಲಿ ಅಸುನೀಗಿದ್ದಾನೆ. ಬಾಲಕ ಮನ್ಸೂರಾಬಾದ್‌ನ ನಾಗಾರ್ಜುನ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಎಂದು ತಿಳಿದು ಬಂದಿದೆ.

Share this Story:

Follow Webdunia kannada