Webdunia - Bharat's app for daily news and videos

Install App

ಧೋನಿಯ ಭವಿಷ್ಯವನ್ನು ಬದಲಾಯಿಸಿದ 2004ರ ಜಿಂಬಾಬ್ವೆ ಪ್ರವಾಸ

Webdunia
ಶನಿವಾರ, 18 ಜೂನ್ 2016 (14:12 IST)
ಜಿಂಬಾಬ್ವೆಗೆ ಭಾರತ ತಂಡವನ್ನು ಪ್ರಕಟಿಸಿದಾಗ ಹಿರಿಯ ಆಟಗಾರ ಧೋನಿಯನ್ನು ಕೂಡ ಸೇರ್ಪಡೆ ಮಾಡಿದ್ದು ಖಂಡಿತವಾಗಿ ಅಚ್ಚರಿ ಮೂಡಿಸಿತ್ತು. ಈ ಪ್ರವಾಸಕ್ಕೆ ಹಿರಿಯ ಆಟಗಾರರಿಗೆ ಸಾಮಾನ್ಯವಾಗಿ ವಿಶ್ರಾಂತಿ ನೀಡಲಾಗುತ್ತದೆ. ಆದರೆ ಕಡಿಮೆ ಪ್ರಾಮುಖ್ಯತೆಯ ಈ ಪ್ರವಾಸಕ್ಕೆ ಯುವಆಟಗಾರರ ಜತೆ ತೆರಳಲು ಧೋನಿ ನಿರ್ಧರಿಸಿದ್ದು ಕೂಡ ಆಸಕ್ತಿದಾಯಕ ಸಂಗತಿ.
 
 ನಿರೀಕ್ಷೆಯಂತೆ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ಸವಾಲನ್ನು ಭಾರತೀಯರು ಹಗುರವಾಗಿ ತೆಗೆದುಕೊಂಡಿದ್ದರು. ಮೈದಾನದ ಹೊರಗಿನ ಸಮಾರಂಭದಲ್ಲಿ ಧೋನಿ ಅತೀ ಆಸಕ್ತಿದಾಯಕ ಕಾಮೆಂಟ್ ಒಂದನ್ನು ಮಾಡಿದ್ದಾರೆ. ಹರಾರೆಯಲ್ಲಿ ಇಂಡಿಯಾ ಹೌಸ್‌ಗೆ ಟೀಂ ಭೇಟಿ ನೀಡಿದಾಗ, ಧೋನಿ ಜಿಂಬಾಬ್ವೆಯನ್ನು ವಿಶೇಷ ಸ್ಥಳವೆಂದು ಪರಿಗಣಿಸಿದ್ದೇಕೆಂದು ಬಹಿರಂಗಮಾಡಿದ್ದಾರೆ.
 
ಜಿಂಬಾಬ್ವೆ ನನಗೆ ವಿಶೇಷ ಸ್ಥಳವಾಗಿದೆ. ಭಾರತಕ್ಕೆ ಆಡುವ ಮುಂಚೆ, 2004ರಲ್ಲಿ ತಾವು ಕೈಗೊಂಡ ಜಿಂಬಾಬ್ವೆ ಪ್ರವಾಸ ತಮ್ಮನ್ನು ಬೆಳಕಿಗೆ ತರಲು ಅವಕಾಶ ನೀಡಿ ಭಾರತ ತಂಡದಲ್ಲಿ ಕಾಯಂ ಸ್ಥಾನವನ್ನು ಕಲ್ಪಿಸಿತು. ಆದ್ದರಿಂದ ಇದು ನನಗೆ ವಿಶೇಷ ಸ್ಥಾನವಾಗಿದ್ದು, ಇಲ್ಲಿಗೆ ಬರಲು ನನಗೆ ಸಂತಸವಾಗುತ್ತದೆ ಎಂದು ಹೇಳಿದರು. 
 
2004ರಲ್ಲಿ ಧೋನಿ ಭಾರತ ಎ ತಂಡದಲ್ಲಿದ್ದು 3 ನಾಲ್ಕು ದಿನಗಳ ಮತ್ತು ಒಂದು 50 ಓವರಿನ ಪಂದ್ಯಗಳನ್ನು  ಜಿಂಬಾಬ್ವೆ ಸೆಲೆಕ್ಟ್ ಇಲೆವನ್ ಮತ್ತು ಜಿಂಬಾಬ್ವೆ ಎ ತಂಡದ ವಿರುದ್ಧ ಆಡಿದ್ದರು. ಎರಡರಲ್ಲೂ ಆಡಿದ್ದ ಧೋನಿ ಆಯ್ಕೆದಾರರನ್ನು ಮೆಚ್ಚಿಸಿದ್ದರು. ಎರಡನೇ ನಾಲ್ಕು ದಿನಗಳ ಪಂದ್ಯಗಲ್ಲಿ ಧೋನಿ 7 ಕ್ಯಾಚ್‌ಗಳು, ನಾಲ್ಕು ಸ್ಟಂಪ್‌ಗಳು ಮತ್ತು 45 ರನ್ ಗಳಿಸಿದ್ದರು. ಭಾರತ ಎಲ್ಲಾ ನಾಲ್ಕು ಪಂದ್ಯಗಳನ್ನು ಆ ಸರಣಿಯಲ್ಲಿ ಗೆದ್ದು ಬಿಸಿಸಿಐಗೆ ಧೋನಿ ಉತ್ತಮ ಭರವಸೆ ಮೂಡಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Sania Mirza: ಆಪರೇಷನ್ ಸಿಂದೂರ ಬಗ್ಗೆ ಪಾಕಿಸ್ತಾನ ಮಾಜಿ ಸೊಸೆ ಸಾನಿಯಾ ಮಿರ್ಜಾ ಹೇಳಿದ್ದು ಕೇಳಿದ್ರೆ ಶಾಕ್ ಆಗ್ತೀರಿ

IPL 2025 RCB: 12 ವರ್ಷದ ಬಳಿಕ ಆರ್ ಸಿಬಿಗೆ ಬಂದ ಅಪ್ಪಟ ಕನ್ನಡಿಗ ಆಟಗಾರ

Rohit Sharma: ಸದ್ದು ಗದ್ದಲವಿಲ್ಲದೇ ರೋಹಿತ್ ಶರ್ಮಾ ನಿವೃತ್ತಿಯಾಗಿದ್ದರ ಹಿಂದಿದೆ ಕಾರಣ

IPL 2025: ಈಡನ್‌ನಲ್ಲಿ ಕೊನೆಯ ಪಂದ್ಯದಲ್ಲಿ ಮಿಂಚಿದ ಧೋನಿ: ಕೋಲ್ಕತ್ತ ವಿರುದ್ಧ ಚೆನ್ನೈ ತಂಡಕ್ಕೆ ರೋಚಕ ಜಯ

Operation Sindoor: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಧರ್ಮಶಾಲಾದ ಐಪಿಎಲ್‌ ಪಂದ್ಯ ಮುಂಬೈಗೆ ಸ್ಥಳಾಂತರ

ಮುಂದಿನ ಸುದ್ದಿ
Show comments