ಆಸ್ಟ್ರೇಲಿಯಾ ವಿರುದ್ಧ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದ್ದು, ಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನ ತಂಡದಿಂದ ಕೈಬಿಡಲಾಗಿದೆ. ಭುಜದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಪಾಂಡ್ಯಾರನ್ನ ಕೈಬಿಡಲಾಗಿದೆ.
ಓಪನರ್ ಮುರಳಿ ವಿಜಯ್ ಸಹ ಭುಜದ ಸಮಸ್ಯೆಯಿಂದ ಬೆಂಗಳೂರು ಟೆಸ್ಟ್ ಆಡಿರಲಿಲ್ಲ. ಆದರೂ ಅವರಿಗೆ 15ರ ಪಟ್ಟಿಯಲ್ಲಿ ಅವಕಾಶ ನೀಡಲಾಗಿದ್ದು, ಮಾರ್ಚ್ 16ರ ರಾಂಚಿಯ 3ನೇ ಟೆಸ್ಟ್ ವೇಳೆಗೆ ಫಿಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.ಒಂದೊಮ್ಮೆ ವಿಜಯ್ ಫಿಟ್ ಆಗಿದ್ದರೆ ಅಭಿನವ್ ಮುಕುಂದ್ ಆಡಲಿದ್ದಾರೆ.