Webdunia - Bharat's app for daily news and videos

Install App

ಉತ್ತಮ ಸ್ಥಿತಿಯಲ್ಲಿ ಭಾರತ: ಫಲಿತಾಂಶದ ನಿರೀಕ್ಷೆಯಲ್ಲಿ ಗವಾಸ್ಕರ್

Webdunia
ಶನಿವಾರ, 29 ಆಗಸ್ಟ್ 2015 (21:09 IST)
ಬಿಗಿಯಾದ ತಂತ್ರದಿಂದ ಮತ್ತು ನಿರಾತಂಕ ಮನೋಭಾವದೊಂದಿಗೆ ಚೇತೇಶ್ವರ್ ಪೂಜಾರ್ ಕ್ರೀಸ್‌ನಲ್ಲಿ ಭರವಸೆಯ ಉಪಸ್ಥಿತಿ ಮೂಡಿಸಿದ್ದಾರೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಯುವ ಆಟಗಾರನನ್ನು ಶ್ಲಾಘಿಸುತ್ತಾ ಹೇಳಿದ್ದಾರೆ.  ಸುದೀರ್ಘ ಕಾಲದ ಬಳಿಕ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಆಗಿರುವ ಪೂಜಾರಾ ಅಜೇಯ 135 ರನ್ ಬಾರಿಸಿ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಆಘಾತದಿಂದ ಭಾರತವನ್ನು ಪಾರು ಮಾಡಿದ್ದರು. 
 
 ಅವರು ಬಿಗಿಯಾದ ತಂತ್ರ ಮತ್ತು ನಿರಾತಂಕ ಮನಸ್ಸಿನೊಂದಿಗೆ ಕಠಿಣ ಸನ್ನಿವೇಶದಿಂದ ಹೊರಬರುತ್ತಾರೆ. ಆಫ್ ಸ್ಟಂಪ್ ಆಚೆ ಚೆಂಡು ಆಡಲಾಗದಿದ್ದಾಗ ಅವರು ಬೇಸರಗೊಳ್ಳುವುದಿಲ್ಲ. ಓಕೆ, ಇದು ನಿಮ್ಮ ಕಾಲ, ನನ್ನ ಕಾಲವೂ ಕೆಲವು ಸಮಯದ ನಂತರ ಬರುತ್ತದೆ ಎಂಬ ಮನೋಧರ್ಮ ಹೊಂದಿದ್ದಾರೆಂದು  ಗವಾಸ್ಕರ್ ಹೇಳಿದರು. 
ಪೂಜಾರಾ ಓಪನಿಂಗ್ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿರುವುದರಿಂದ , ಓಪನರ್ ಕ್ರಮಾಂಕಕ್ಕೆ ಭಾರತಕ್ಕೆ ಅನೇಕ ಆಯ್ಕೆಗಳು ಸಿಕ್ಕಿದಂತಾಗಿದೆ. ಧವನ್ ಮತ್ತು ಮುರಳಿ ವಿಜಯ್ ಗಾಯದಿಂದ ನಿರ್ಗಮಿಸಿದ್ದು,  ಎರಡನೇ ಟೆಸ್ಟ್‌ನಲ್ಲಿ ಶತಕವನ್ನು ದಾಖಲಿಸಿದ್ದಾರೆ.
 
 ವಿಜಯ್ ಮತ್ತು ಧವನ್ ಪುನಃ ತಮ್ಮ ಸ್ಥಾನಕ್ಕೆ ಮರಳಿದರೆ ಆಯ್ಕೆದಾರರಿಗೆ ಯಾರನ್ನು ಓಪನಿಂಗ್ ಕಳಿಸಬೇಕೆಂಬ ತಲೆನೋವು ಆರಂಭವಾಗಬಹುದು. ಆದರೆ ಆರಂಭಿಕ ಆಟಗಾರರಾಗಿ ಯಾರೂ ಇಲ್ಲದೇ ಇರುವುದಕ್ಕಿಂತ ವಿಪುಲ ಆರಂಭಿಕ ಆಟಗಾರರ ಸಮಸ್ಯೆ ಇರುವುದು ಒಳ್ಳೆಯದು ಎಂದು ಮಾಜಿ ಓಪನರ್ ತಿಳಿಸಿದರು. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments