Webdunia - Bharat's app for daily news and videos

Install App

ಎರಡು ವರ್ಷದ ಬಳಿಕ ತಂಡಕ್ಕೆ ಮರಳಿದ ಗಂಭೀರ್

Webdunia
ಬುಧವಾರ, 28 ಸೆಪ್ಟಂಬರ್ 2016 (07:06 IST)
ಸ್ನಾಯು ಸೆಳೆತಕ್ಕೆ ಒಳಗಾದ ಕೆ.ಎಲ್ ರಾಹುಲ್ ತಂಡದಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಹಿರಿಯ ಆಟಗಾರ ಗೌತಮ್ ಗಂಭೀರ್ ಎರಡು ವರ್ಷದ ಬಳಿಕ ತಂಡಕ್ಕೆ ಮರಳುವ ಅವಕಾಶ ಪಡೆದುಕೊಂಡಿದ್ದಾರೆ. 

34 ವರ್ಷದ ಗಂಭೀರ್ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. 
 
ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್‌ನಿಂದ ತಂಡದಿಂದ ಹೊರಗುಳಿದಿರುವ ಇಶಾಂತ್ ಶರ್ಮಾ 2 ನೇ ಪಂದ್ಯಕ್ಕೂ ಅಲಭ್ಯರಾಗಿದ್ದು ಅವರ ಬದಲು ಆಪ್ ಸ್ಪಿನ್ನರ್ ಜಯಂತ್ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ. ಈ ಹಿಂದೆ ತಂಡಕ್ಕೆ ಆಯ್ಕೆಯಾಗಿದ್ದರೂ ಜಯಂತ್ ಇಲ್ಲಿಯರೆಗೂ ಮೈದಾನಕ್ಕೆ ಇಳಿದಿಲ್ಲ.
 
ಕಳೆದೆರಡು ವರ್ಷಗಳಿಂದ ವನವಾಸದಲ್ಲಿದ್ದ ಗೌತಿಗೆ ಐಪಿಎಲ್ ಮತ್ತು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡದಿರುವುದು ಸಹಜವಾಗಿಯೇ ನಿರಾಶೆ ತರಿಸಿತ್ತು. ತೀವ್ರ ಬೇಸರಗೊಂಡಿದ್ದ ಗಂಭೀರ್, ನನಗೆ ನಿರಾಶೆಯಾಗಿದೆ ನಿಜ. ಹಾಗಂತ ನಾನು ಸೊಲೊಪ್ಪಿಕೊಳ್ಳೊದಿಲ್ಲ. ಅವಕಾಶಕ್ಕಾಗಿ ಮತ್ತೆ ಹೋರಾಡುತ್ತೇನೆ. ತಂಡಕ್ಕೆ ಮತ್ತೆ ಮರಳಿಯೇ ತೀರುತ್ತೇನೆ ಎಂದು ನೋವಿನಲ್ಲಿಯೂ ಆಶಾವಾದವನ್ನು ವ್ಯಕ್ತ ಪಡಿಸಿದ್ದರು. ಕೊನೆಗೂ ಅವರ ಪರಿಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ. 
 
ಮತ್ತೋರ್ವ ಹಿರಿಯ ಆಟಗಾರ ಯುವರಾಜ್ ಸಿಂಗ್ ಕೂಡ ಕಿವೀಸ್ ವಿರುದ್ಧದ ಏಕದಿನ ತಂಡಕ್ಕೆ ಮರಳುವ ಸಾಧ್ಯತೆ ಇದೆ.
 
ಗಂಭೀರ್ ಮತ್ತು ಯುವಿ ವಾಪಸಾತಿಗೆ ತಂಡದ ಕೋಚ್ ಅನಿಲ್ ಕುಂಬ್ಳೆ ಪಾತ್ರ ಮಹತ್ವದೆಂದು ಹೇಳಲಾಗುತ್ತಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಸೂಪರ್‌ ಕಿಂಗ್ಸ್ ಗಾಯಕ್ಕೆ ಉಪ್ಪು ಸವರಿದ ಕಿಂಗ್ಸ್‌: ಟೂರ್ನಿಯಿಂದ ಧೋನಿ ಪಡೆ ಔಟ್‌

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

ಮುಂದಿನ ಸುದ್ದಿ
Show comments