ನವದೆಹಲಿ: ಭಾರತದ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣ ಅಪ್ಪಳಿಸಿದ ಸಂದರ್ಭದಲ್ಲಿ ಗಂಗೂಲಿಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಆ ಕಾಲದಲ್ಲಿ ಯಾವುದೇ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಗಳು ಇಲ್ಲದಿರುವುದರಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಗಂಗೂಲಿ ಮುಂತಾದ ಆಟಗಾರರನ್ನು ಅವರ ವೃತ್ತಿಜೀವನದಲ್ಲಿ ಎಂದಾದರೂ ಪಂದ್ಯ ಫಿಕ್ಸ್ ಮಾಡಲು ಬುಕ್ಕಿಗಳು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ನಿರಾಕರಣೆಯ ಉತ್ತರವನ್ನು ನೀಡಿದ್ದರು.
ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲವಾದರೂ, ಅವರನ್ನು ಬುಕ್ಕಿಗಳು ಸಂಪರ್ಕಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗ ಅವರು ಹೇಳಿದ ಧಾಟಿ ನಿಜವೆಂದು ಕಾಣುತ್ತಿದ್ದು, ಗಂಗೂಲಿ ಅಥವಾ ಅವರ ಬಳಗದಲ್ಲಿರುವ ಯಾರೊಬ್ಬರನ್ನೂ ಸಂಪರ್ಕಿಸುವ ಎದೆಗಾರಿಕೆ ಬುಕ್ಕಿಗಳಿಗೆ ಇರಲಿಲ್ಲವೆಂದು ಮಾಜಿ ಬುಕ್ಕಿಯೊಬ್ಬರು ಹೇಳಿದ್ದಾರೆ.
ಗಂಗೂಲಿ ನಾಯಕನಾಗಿದ್ದಾಗ ಅನೇಕ ಬುಕ್ಕಿಗಳು ಅವರು ಪಂದ್ಯ ಫಿಕ್ಸ್ ಮಾಡಬೇಕೆಂದು ಬಯಸಿದ್ದರು. ಅವರು ಮಾತ್ರವಲ್ಲದೇ ಸಚಿನ್, ಕುಂಬ್ಳೆಯನ್ನು ತಮ್ಮ ಕಡೆ ಸೆಳೆದುಕೊಂಡರೆ, ಇಡೀ ತಂಡದ ಮೇಲೆ ಪ್ರಭಾವ ಬೀರಬಹುದೆಂದು ಭಾವಿಸಿದ್ದರು. ಆದರೆ ದಾದಾ ಅತ್ಯಂತ ದೇಶಾಭಿಮಾನಿ ನಾಯಕರಾಗಿದ್ದು ಇದು ಸಂಭವಿಸುವುದು ಕಷ್ಟ ಎಂಬ ಅರಿವಿತ್ತು. ಹೀಗಾಗಿ ಬುಕ್ಕಿಗಳು ಅವರನ್ನು ಸಂಪರ್ಕಿಸಲು ಹೆದರಿದ್ದರು. ಗಂಗೂಲಿಯನ್ನು ಮಾರಾಟದ ವಸ್ತುವಾಗಿಸಲು ಸಾಧ್ಯವಿಲ್ಲ ಮತ್ತು ಅವರನ್ನು ಸಂಧಿಸಲು ಯಾರಿಗೂ ಧೈರ್ಯವಿಲ್ಲ. ಏಕೆಂದರೆ ಬುಕ್ಕಿಗಳ ವ್ಯವಹಾರ ಅವ್ಯವಸ್ಥೆಗೀಡಾಗುವ ಭಯವಿತ್ತು ಎಂದಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.