Webdunia - Bharat's app for daily news and videos

Install App

ಅಪಾಯದ ಸನ್ನಿವೇಶಗಳಲ್ಲಿ ಪಾರಾಗುವುದು ತಮಗೆ ಗೊತ್ತು: ಧೋನಿ

Webdunia
ಶನಿವಾರ, 7 ಮಾರ್ಚ್ 2015 (12:33 IST)
ತಂಡಕ್ಕೆ ಸಂಕಷ್ಟದ ಸನ್ನಿವೇಶಗಳಲ್ಲಿ ಆಪದ್ಬಾಂಧವ ಎಂದು ಪರಿಗಣಿಸಲಾದ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಕೂಡ ಇತರರಂತೆ ಒತ್ತಡದ ಭಾವನೆ ಅನುಭವಿಸುವುದಾಗಿ ಹೇಳಿದ್ದಾರೆ. ಆದರೆ ಅಪಾಯಕಾರಿ ಸನ್ನಿವೇಶಗಳಲ್ಲಿ ಪಾರಾಗುವ ಕ್ರಮವನ್ನು ನಿರ್ವಹಿಸುವುದು ಹೇಗೆಂದು  ತಮಗೆ ಗೊತ್ತಿದೆ ಎಂದು ಹೇಳಿದರು.ನಿ ಅವರ ಅಜೇಯ 45 ರನ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪ್ರಯಾಸದ ಗೆಲುವು ಗಳಿಸಿತ್ತು.
 
ನಾನು ಸಂಕಷ್ಟದ ಸನ್ನಿವೇಶದಿಂದ ಪಾರಾಗುವುದು ಹೇಗೆಂದು ತಿಳಿದಿದ್ದೇನೆ. ಆದರೆ ಪ್ರತಿ ಬಾರಿ ನಾನು ಯಶಸ್ವಿಯಾಗುವುದಿಲ್ಲ. ಆದರೆ ಅದರಿಂದ ಪಾರಾಗುವ ವಿಧಾನ ಗೊತ್ತಿದ್ದರೆ ಅದು ಸುಲಭವಾಗುತ್ತದೆ ಎಂದು ನಾಯಕ ಧೋನಿ ಹೇಳಿದರು. ಧೋನಿ ಕಳೆದ ಒಂದು ದಶಕದಲ್ಲಿ ತಮ್ಮ ಆಟದಲ್ಲಿ ಸುಧಾರಣೆ ಮಾಡಿಕೊಂಡಿದ್ದು, ಸೀಮಿತ ಓವರುಗಳ ಪಂದ್ಯದಲ್ಲಿ ಉತ್ತಮ ಫಿನಿಷರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
 
ನಾನು ಬೇಡಿಕೆಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುತ್ತೇನೆ. ಆ ಕಾರಣದಿಂದ ನನಗೆ ಅನುಕೂಲವಾಗಿದೆ ಎಂದು ಧೋನಿ ಹೇಳಿದರು. ನಿನ್ನೆ ನಡೆದ ಪಂದ್ಯದಲ್ಲಿ ಮೇಲಿನ ಕ್ರಮಾಂಕದ ಆಟಗಾರರು ಸಂಪೂರ್ಣವಾಗಿ ವಿಫಲವಾದ ನಂತರ ತಂಡ ಯಾವ ಸ್ಥಿತಿಯಲ್ಲಿತ್ತು ಎಂದು ವಿವರಿಸಿದರು.
ನಾನು ಬ್ಯಾಟಿಂಗ್ ಮಾಡುವ ಕ್ರಮಾಂಕದಲ್ಲಿ ಒತ್ತಡ ಸಹಜ. ಅದು ಚೇಸ್ ಮಾಡುವ ಒತ್ತಡ. ನಾನು ಕೆಳಕ್ರಮಾಂಕದ ಆಟಗಾರರೊಂದಿಗೆ ಜೊತೆಯಾಟ ಆಡಬೇಕಾಗುತ್ತದೆ ಎಂದು ಧೋನಿ ಹೇಳಿದರು.
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments