Webdunia - Bharat's app for daily news and videos

Install App

ನರಸಿಂಗ್ ಯಾದವ್‌ಗೆ ರಿಯೋ ಬಸ್ ಮಿಸ್ ಆಗದಂತೆ ಶತಪ್ರಯತ್ನ

Webdunia
ಮಂಗಳವಾರ, 2 ಆಗಸ್ಟ್ 2016 (12:46 IST)
ನರಸಿಂಗ್ ಯಾದವ್ ಕಳೆದ ತಿಂಗಳ ಅನಾಬೋಲಿಕ್ ಸ್ಟೆರಾಯ್ಡ್ ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಪಡೆದ ಬಳಿಕ ಈಗ ನಾಡಾ ಕ್ಲೀನ್ ಚಿಟ್ ನೀಡಿದ್ದರೂ ಕೂಡ ರಿಯೋದ ಹಾದಿ ಯಾದವ್‌ಗೆ ಇನ್ನೂ ಕಠಿಣವಾಗಿದೆ. ಆಗಸ್ಟ್ 5ರಿಂದ ಆರಂಭವಾಗುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ರಿಯೋದಲ್ಲಿರುವ ಸಹ ಅಥ್ಲೀಟ್‌ಗಳನ್ನು ಸೇರಲು ಇನ್ನಷ್ಟು ಹಾದಿಯನ್ನು ಅವರು ಸವೆಸಬೇಕಾಗಿದೆ.
 
 ನರಸಿಂಗ್ ರಿಯೋದಲ್ಲಿ ಭಾಗವಹಿಸಲು ಇನ್ನೊಂದು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾಡಾ ಮತ್ತು ಐಒಸಿಯ ಅನುಮೋದನೆ ಪಡೆಯಬೇಕಾಗಿದೆ. ಇದಿಷ್ಟೇ ಅಲ್ಲದೇ ಸಂಯುಕ್ತ ವಿಶ್ವ ಕುಸ್ತಿ ಸಂಘಟನೆಯು 74 ಕೆಜಿ ವಿಭಾಗದಲ್ಲಿ ಪ್ರವೀಣ್ ರಾಣಾಗೆ ಬದಲಿಯಾಗಿ ಪುನಃ ಅವರನ್ನು ಮರುಸ್ಥಾಪನೆ ಮಾಡಲು ಒಪ್ಪಬೇಕಾಗಿದೆ.
 
ಸಂಯುಕ್ತ ವಿಶ್ವ ಕುಸ್ತಿ ಸಂಘಟನೆಗೆ ಇಂದು ಪತ್ರ ಬರೆದು ಪ್ರವೀಣ್ ರಾಣಾ ಹೆಸರಿಗೆ ಬದಲಿಯಾಗಿ ನರಸಿಂಗ್ ಯಾದವ್ ಅವರನ್ನು ಕಳಿಸುವಂತೆ ಕೋರುವುದಾಗಿ ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ತಿಳಿಸಿದರು. ನರಸಿಂಗ್ ಯಾದವ್ ರಿಯೋ ಬಸ್ ಮಿಸ್ ಮಾಡಿಕೊಳ್ಳದಂತೆ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುವುದಾಗಿಯೂ ಅವರು ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಮುಂದಿನ ಸುದ್ದಿ
Show comments