Webdunia - Bharat's app for daily news and videos

Install App

ಅಂದು ಕಡೆಗಣಿಸಲ್ಪಟ್ಟವರೇ ಟೀಂ ಇಂಡಿಯಾ ಗೆಲುವಿನ ರೂವಾರಿಯಾದರು!

Webdunia
ಸೋಮವಾರ, 7 ಅಕ್ಟೋಬರ್ 2019 (08:53 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ನೆರವಾಗಿದ್ದು ಆಯ್ಕೆ ಸಮಿತಿಯಿಂದ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಿಂದ ಕಡೆಗಣಿಸಲ್ಪಟ್ಟವರು ಎಂದರೆ ತಪ್ಪಾಗಲಾರದು.


ಮೊದಲನೆಯದಾಗಿ ಮಯಾಂಕ್ ಅಗರ್ವಾಲ್. ಹಿಂದೊಮ್ಮೆ ಆಯ್ಕೆ ಸಮಿತಿ ಅವರನ್ನು ಕಡೆಗಣಿಸುತ್ತಲೇ ಇತ್ತು. ಆದರೆ ತಾವು ಆಡಿದ ಮೊದಲ ಪಂದ್ಯದಲ್ಲೇ ಭರವಸೆ ನೀಡಿದ ಮಯಾಂಕ್ ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು.

ಇನ್ನು, ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ಪಂದ್ಯ ಶ್ರೇಷ್ಠರಾದ ರೋಹಿತ್ ಶರ್ಮಾ ಕತೆಯೂ ಹೆಚ್ಚು ಕಮ್ಮಿ ಇದುವೇ. ಸೀಮಿತ ಓವರ್ ಗಳಲ್ಲಿ ಅತ್ಯಂತ ದಾಂಡಿಗ ಎನಿಸಿಕೊಂಡಿದ್ದ ರೋಹಿತ್ ರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸುತ್ತಲೇ ಇರಲಿಲ್ಲ. ಈ ಬೇಸರ ರೋಹಿತ್ ಗಿತ್ತು. ಅದಕ್ಕೆ ಅವರು ಈ ಪಂದ್ಯದಲ್ಲಿ ಆಟದ ಮೂಲಕ ಪ್ರತಿಕ್ರಿಯೆ ನೀಡಿದರು.

ರವಿಚಂದ್ರನ್ ಅಶ್ವಿನ್ ಕತೆಯೂ ಇದಕ್ಕಿಂತ ಭಿನ್ನವಲ್ಲ. ಹಿರಿಯ ಸ್ಪಿನ್ನರ್ ಆಗಿದ್ದ ಅಶ್ವಿನ್ ರನ್ನು ಸೀಮಿತ ಓವರ್ ಗಳಿಂದ ಕೈಬಿಡಲಾಯಿತು. ಬಳಿಕ ಟೆಸ್ಟ್ ತಂಡದಲ್ಲೂ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ಆದರೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕಾಗ  ಅದನ್ನು ಭರ್ಜರಿಯಾಗಿಯೇ ಬಳಸಿಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI TEST: ಕನ್ನಡಿಗ ರಾಹುಲ್‌ ಅಜೇಯ ಅರ್ಧಶತಕ: ಮೊದಲ ದಿನ ಭಾರತಕ್ಕೆ ಮೇಲುಗೈ

India vs West Indies TEST: ಸಿರಾಜ್, ಬೂಮ್ರಾ ಬೆಂಕಿದಾಳಿಗೆ ವಿಂಡೀಸ್ ಉಡೀಸ್‌

ಆರ್‌ಸಿಬಿ ತಂಡದ ಮಾರಾಟಕ್ಕೆ ಮತ್ತೆ ರೆಕ್ಕೆ ಪುಕ್ಕ: ಕುತೂಹಲ ಕೆರಳಿಸಿದ ಪೂನಾವಾಲ ಪೋಸ್ಟ್‌

ಏಷ್ಯಾ ಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ವಿಂಡೀಸ್‌ ಮೇಲೆ ಸವಾರಿ ಮಾಡುವತ್ತ ಟೀಂ ಇಂಡಿಯಾ

ಬಿಸಿಸಿಐ ಮುಂದೆ ಥಂಡಾ ಹೊಡೆದು ಏಷ್ಯಾ ಕಪ್ ಟ್ರೋಫಿ ವಾಪಸ್ ಮಾಡಿದ ಮೊಹ್ಸಿನ್ ನಖ್ವಿ

ಮುಂದಿನ ಸುದ್ದಿ
Show comments