Webdunia - Bharat's app for daily news and videos

Install App

ಚೆಂಡು ಎದೆಗೆ ಬಡಿದು ಸಾವನ್ನಪ್ಪಿದ ತಮಿಳುನಾಡು ಮೂಲದ ಕ್ರಿಕೆಟ್ ಆಟಗಾರ

Webdunia
ಮಂಗಳವಾರ, 7 ಜುಲೈ 2015 (19:59 IST)
ಬ್ರಿಟಿಷ್ ತಮಿಳು ಮೂಲದ  ಬ್ಯಾಟ್ಸ್‌ಮನ್ ಭವಾಲನ್ ಪದ್ಮನಾಥನ್ ಎದೆಗೆ ಚೆಂಡು ಬಡಿದು ದಾರುಣವಾಗಿ ಮೃತಪಟ್ಟ ಘಟನೆ ಸರ್ರೆಯಲ್ಲಿ ಸಂಭವಿಸಿದೆ. ಭಾನುವಾರ ಲಾಂಗ್ ಡಿಟ್ಟನ್ ಮೈದಾನದಲ್ಲಿ  ಬ್ರಿಟಿಷ್ ತಮಿಳು ಲೀಗ್‌ ಪಂದ್ಯದಲ್ಲಿ ಮನಿಪೇ ಪ್ಯಾರಿಷ್ ಸ್ಫೋರ್ಟ್ಸ್ ಕ್ಲಬ್ ಪರ ಆಡುತ್ತಿದ್ದಾಗ ಚೆಂಡು ನೇರವಾಗಿ ಎದೆಗೆ ಬಡಿಯಿತು. 
 
ಪದ್ಮನಾಥನ್ ಅವರಿಗೆ ಸಿಪಿಆರ್ ನೀಡಲಾಯಿತು ಮತ್ತು ಆಂಬ್ಯುಲೆನ್ಸ್ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ 24 ವರ್ಷದ ಆಟಗಾರ ಹೃದಯಾಘಾತದಿಂದ ಅಸುನೀಗಿದ್ದಾರೆ.
 
ಪದ್ಮನಾಥನ್ ಅವರ ಜೊತೆ ಬ್ಯಾಟಿಂಗ್ ಮಾಡುತ್ತಿದ್ದ ಸಹಆಟಗಾರ ಪದ್ಮನಾಥನ್ ಎದೆಗೆ ಚೆಂಡು ತಾಗಿದ ಕೂಡಲೇ ಏನಾದರೂ ಸಮಸ್ಯೆಯಾಗಿದೆಯೇ ಎಂದು ಕೇಳಿದರು. ಅದಕ್ಕೆ ಪದ್ಮನಾಥನ್ ಏನೂ ಸಮಸ್ಯೆಯಿಲ್ಲ, ಚೆನ್ನಾಗಿದ್ದೇನೆ, ಐ ಆಮ್ ಆಲ್‌ರೈಟ್ ಎಂದು ಎದೆಯನ್ನು ಹಿಡಿದುಕೊಂಡು  ಸಂಜ್ಞೆ ಮಾಡಿದ್ದರು. ಬಳಿಕ ವಿಕೆಟ್ ಹಿಂದೆ ಕೆಲವು ಹೆಜ್ಜೆ ಹಿಂದೆ ತೆರಳಿ ಕುಸಿದುಬಿದ್ದರು ಎಂದಿದ್ದಾರೆ. 
 
ಸರ್ರೆ ಚೀಫ್ ಎಕ್ಸಿಕ್ಯೂಟಿವ್ ರಿಚರ್ಡ್ ಗೋಲ್ಡ್ ಭವಾಲನ್ ಸಾವಿಗೆ ಸಂತಾಪ ಸೂಚಿಸಿ,  ಅವರ ಕುಟುಂಬಕ್ಕೆ,ಸ್ನೇಹಿತರಿಗೆ ಮತ್ತು ಉಳಿದೆಲ್ಲರಿಗೂ ತಮ್ಮ ಸಹಾನೂಭೂತಿಯನ್ನು ಸೂಚಿಸಿದರು. 
 
 ಆಸ್ಟ್ರೇಲಿಯಾದ ಮಾಜಿ ಆಟಗಾರ ಫಿಲಿಪ್ ಹ್ಯೂಸ್ ಅವರ ಕುತ್ತಿಗೆಗೆ ಬೌನ್ಸರ್ ಬಡಿದು ಸಾವನ್ನಪ್ಪಿದ ಬಳಿಕ ಮೈದಾನದಲ್ಲಿ ಬ್ಯಾಟ್ಸ್‌ಮನ್ ಸುರಕ್ಷತೆಯು ಇತ್ತೀಚಿನ ತಿಂಗಳಿನಲ್ಲಿ ಚರ್ಚೆಯ ವಿಷಯವಾಗಿತ್ತು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments