Webdunia - Bharat's app for daily news and videos

Install App

ಭಾರತ-ಪಾಕ್ ಕ್ರಿಕೆಟ್ ಪಂದ್ಯ ನೋಡಿ ‘ದೇವರೂ’ ನಗುತ್ತಿದ್ದರು!

Webdunia
ಸೋಮವಾರ, 5 ಜೂನ್ 2017 (08:29 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ತಂಡದ ನಡುವೆ ನಿನ್ನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಿದ್ದಾ ಜಿದ್ದಿನ ಫೈಟ್ ನಡೆಯಿತು. ಭಾರತ ಈ ಪಂದ್ಯವನ್ನು 124 ರನ್ ಗಳಿಂದ ಗೆಲ್ಲಲು ‘ದೇವರ’ ಕೃಪೆಯೂ ಇತ್ತು ಎಂದರೆ ನಂಬಲೇ ಬೇಕು.

 
ಅಷ್ಟಕ್ಕೂ ಈ ದೇವರು ಯಾರು ಗೊತ್ತಾ? ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್. ಹೌದು. ನಿನ್ನೆಯ ಪಂದ್ಯವನ್ನು ವೀಕ್ಷಿಸಲೆಂದೇ ಸಚಿನ್ ಪುತ್ರನ ಸಮೇತ ಇಂಗ್ಲೆಂಡ್ ಗೆ ಹಾರಿದ್ದರು. ವಿಶೇಷ ಗಣ್ಯರ ಸಾಲಿನಲ್ಲಿ ಕುಳಿತು ಪಂದ್ಯದುದ್ದಕ್ಕೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಚಿಯರ್ ಮಾಡುತ್ತಲೇ ಇದ್ದರು.

ಅದಕ್ಕಿಂತಲೂ ಮೊದಲು ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಿ ಕೆಲವು ಉಪಯುಕ್ತ ಸಲಹೆಗಳನ್ನೂ ನೀಡಿದರು. ಕೊನೆಗೆ ಟೀಂ ಇಂಡಿಯಾ ಆಟಗಾರರು ಸಚಿನ್ ಜತೆ ಸೆಲ್ಫಿ ತೆಗೆದು ಸಂಭ್ರಮಿಸಿದರು.

ಕ್ರಿಕೆಟ್ ದೇವರ ಆಶೀರ್ವಾದದ ಫಲವೋ ಎಂಬಂತೆ ಟೀಂ ಇಂಡಿಯಾ ಈ ಪಂದ್ಯದಲ್ಲಿ 124 ರನ್ ಗಳಿಂದ ಗೆಲುವು ಸಾಧಿಸಿತು. ನಡುವೆ ಮಳೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿದರೂ, ಫಲಿತಾಂಶಕ್ಕೆ ತೊಂದರೆಯಾಗಲಿಲ್ಲ.

ಭಾರತ 48 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಪಾಕ್ ಭಾರತದ ಕರಾರುವಾಕ್ ದಾಳಿಗೆ ತತ್ತರಿಸಿ 164 ರನ್ ಗಳಿಗೆ ಆಲೌಟ್ ಆಯಿತು. ಉಮೇಶ್ ಯಾದವ್ 3 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಕಿತ್ತರು. ಅಂತೂ ಭಾರತದಲ್ಲಿ ಪಾಕ್ ವಿರುದ್ಧ ಯುದ್ಧ ಗೆದ್ದಷ್ಟೇ ಸಂಭ್ರಮ!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೂರು ತಿಂಗಳ ಬಳಿಕ ಕೊನೆಗೂ ಮೌನ ಮುರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಮಾತ್ರ ಏನು ಸ್ಪೆಷಲ್ಲಾ.. ಲಂಡನ್ ವಾಸಿ ಕೊಹ್ಲಿಗೆ ಅಲ್ಲಿಯೇ ಫಿಟ್ನೆಸ್ ಟೆಸ್ಟ್

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನಕ್ಕೆ ಹೆಚ್ಚಿದ ಒತ್ತಡ: ಇಂದು ಸಿಎಂ ಭೇಟಿ ಮಾಡಲಿರುವ ಭಾರತಿ ವಿಷ್ಣುವರ್ಧನ್

ಟೀಂ ಇಂಡಿಯಾ ಪ್ರಾಯೋಜಕತ್ವ ವಹಿಸಲು ಈ ಷರತ್ತುಗಳು ಅನ್ವಯ

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಆಡದ ಏಕೈಕ ಟೀಂ ಇಂಡಿಯಾ ಆಟಗಾರ

ಮುಂದಿನ ಸುದ್ದಿ
Show comments