Webdunia - Bharat's app for daily news and videos

Install App

ವಿಚಿತ್ರವಾಗಿ ರೀಲ್ಸ್ ಮಾಡಿದ್ದಕ್ಕೆ ಯುವರಾಜ್ ಸಿಂಗ್, ಹರ್ಭಜನ್, ಸುರೇಶ್ ರೈನಾ ವಿರುದ್ಧ ಕೇಸ್

Krishnaveni K
ಮಂಗಳವಾರ, 16 ಜುಲೈ 2024 (09:50 IST)
Photo Credit: Facebook
ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ವಿರುದ್ಧ ವಿಚಿತ್ರವಾಗಿ ರೀಲ್ಸ್ ಮಾಡಿದ್ದಕ್ಕೆ ಕೇಸ್ ದಾಖಲಾಗಿದೆ. ವಿಶ್ವ ಚಾಂಪಿಯನ್ಸ್ ಗೆದ್ದ ಬಳಿಕ ಯುವಿ, ಭಜಿ, ರೈನಾ ವಿಚಿತ್ರ ರೀಲ್ಸ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಾಕಿಸ್ತಾನ ತಂಡವನ್ನು ಲೆಜೆಂಡ್ಸ್ ವಿಶ್ವ ಚಾಂಪಿಯನ್ಸ್ ಟೂರ್ನಿ ಫೈನಲ್ ನಲ್ಲಿ ಸೋಲಿಸಿದ ಬಳಿಕ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ತೌಬಾ ತೌಬಾ ರೀಲ್ಸ್ ಗೆ ಡಬ್ ಮಾಡಿ ಪ್ರಕಟಿಸಿದ್ದರು.

ಈ ರೀಲ್ಸ್ ನಲ್ಲಿ ಮೂವರೂ ವಿಕಲಾಂಗರಂತೆ ನಡೆದುಕೊಂಡು ಬರುವ ದೃಶ್ಯವಿದೆ. ಈ ಮೂವರು ಇಂತಹದ್ದೊಂದು ರೀಲ್ಸ್ ಪ್ರಕಟಿಸುತ್ತಿದ್ದಂತೇ ಹಲವರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ವಿಕಲಾಂಗ ಚೇತನರ ಹಕ್ಕುಗಳ ಸಂರಕ್ಷಿಸುವ ಎನ್ ಸಿಪಿಇಡಿಪಿ ಎಂಬ ಸಂಸ್ಥೆ ದೂರು ದಾಖಲಿಸಿದೆ.

ದೆಹಲಿಯ ಅಮರ್ ಕಾಲೊನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದು ದೇಶದಲ್ಲಿರುವ 10 ಕೋಟಿ ಗೂ ಅಧಿಕ ವಿಕಲಾಂಗ ಚೇತನರಿಗೆ ಮಾಡಿದ ಅವಮಾನ ಎಂದು ದೂರುದಾರರು ಹೇಳಿದ್ದಾರೆ. ತಮ್ಮ ರೀಲ್ಸ್ ವಿವಾದಕ್ಕೀಡಾಗುತ್ತಿದ್ದಂತೇ ಕ್ರಿಕೆಟಿಗರು ಕ್ಷಮೆ ಯಾಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಭಾರತದ ವಾಲ್ 2.0 ಖ್ಯಾತಿಯ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಮುಂದಿನ ಸುದ್ದಿ
Show comments