Select Your Language

Notifications

webdunia
webdunia
webdunia
webdunia

ಭಾರತದಲ್ಲೇ ಆಡಿ, ಸ್ವದೇಶಿ ಸರಣಿ ನಷ್ಟಕ್ಕೆ ಬಿಸಿಸಿಐ ಪರಿಹಾರ ನೀಡುತ್ತದೆ: ರಾಜೀವ್ ಶುಕ್ಲಾ

ಭಾರತದಲ್ಲೇ ಆಡಿ,  ಸ್ವದೇಶಿ ಸರಣಿ ನಷ್ಟಕ್ಕೆ ಬಿಸಿಸಿಐ  ಪರಿಹಾರ ನೀಡುತ್ತದೆ: ರಾಜೀವ್ ಶುಕ್ಲಾ
ಮುಂಬೈ , ಶನಿವಾರ, 21 ನವೆಂಬರ್ 2015 (17:15 IST)
ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಅವರು ಯುಎಇನಲ್ಲಿ ಸ್ವದೇಶಿ ಸರಣಿಯನ್ನು ಆಡುವ ಬದಲಿಗೆ ಸ್ವದೇಶದಲ್ಲೇ ಸುರಕ್ಷಿತ ಮೈದಾನವನ್ನು ಅಭಿವೃದ್ಧಿಪಡಿಸಲು ಆರಂಭಿಸುವಂತೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಲಹೆ ನೀಡಿದ್ದಾರೆ.  ಐಪಿಎಲ್ ಅಧ್ಯಕ್ಷರೂ ಕೂಡ ಆಗಿರುವ ಶುಕ್ಲಾ ಯುಎಇನಲ್ಲಿ ಆಡುವಂತೆ ಒಪ್ಪಿಸುವ ಬದಲಿಗೆ ಪಾಕಿಸ್ತಾನದಲ್ಲಿ ಸುರಕ್ಷಿತ ತಾಣಗಳನ್ನು ನಿರ್ಮಿಸಬೇಕು.

ಯುಎಇನಲ್ಲಿ ಕ್ರಿಕೆಟ್ ಆಟ ಮುಂದುವರಿಸಿದಲ್ಲಿ ಪಾಕಿಸ್ತಾನ ಕ್ರಿಕೆಟ್ ನಿಧಾನಗತಿಯಲ್ಲಿ ಕಷ್ಟಕ್ಕೆ ಸಿಲುಕುತ್ತದೆ ಎಂದು ಹೇಳಿರುವ ಅವರು ಲಾಹೋರ್ ಮೈದಾನವನ್ನು ಸುರಕ್ಷಿತ ತಾಣವಾಗಿ ನಿರ್ಮಿಸಬಹುದು ಎಂದು ಹೇಳಿದರು.  ಪಿಸಿಬಿ ಲಾಹೋರ್ ಮೈದಾನದ ಬಳಿ ತಂಡದ ಹೊಟೆಲ್ ನಿರ್ಮಾಣ ಮಾಡಿ ಸಾಕಷ್ಟು ಭದ್ರತೆಯನ್ನು ಒದಗಿಸಿದಲ್ಲಿ ಭಾರತಕ್ಕೆ ಲಾಹೋರ್‌ನಲ್ಲಿ ಆಡಲು ಯಾವುದೇ ಆಕ್ಷೇಪವಿಲ್ಲ ಎಂದು ಅವರು ಹೇಳಿದರು.
 
ಬಳಿಕ ಶುಕ್ಲಾ ಸ್ಪಷ್ಟೀಕರಣ ನೀಡುತ್ತಾ, ಪಾಕಿಸ್ತಾನ ಐಸಿಸಿಗೆ ಸಾಕಷ್ಟು ಭದ್ರತಾ ಭರವಸೆಗಳನ್ನು ನೀಡಿದರೆ ಮತ್ತು ಇತರೆ ಮಂಡಳಿಗಳಿಗೆ ಕೂಡ ಅಲ್ಲಿ ಆಡಲು ಯಾವುದೇ ಆಕ್ಷೇಪವಿಲ್ಲದಿದ್ದರೆ ಪ್ರತಿಯೊಂದು ತಂಡವೂ ಅಲ್ಲಿಗೆ ಆಡಲು ಬರುತ್ತದೆ ಎಂದು ಹೇಳಿದರು. 
 
ಎರಡು ಮಂಡಳಿಗಳ ನಡುವೆ ಕಳೆದ ವರ್ಷ ಸಹಿ ಹಾಕಲಾದ ಒಡಂಬಡಿಕೆ ಕುರಿತು ನೆನಪಿಸಿದಾಗ, ಐಸಿಸಿ ಮತ್ತು ಬಿಸಿಸಿಐಗೆ ಬೇರೆಯವರು ಮುಖ್ಯಸ್ಥರಾಗಿದ್ದಾಗ ಅದಕ್ಕೆ ಸಹಿ ಹಾಕಲಾಗಿತ್ತು. ಈಗ ನಮ್ಮ ಪ್ರಸಕ್ತ ಅಧ್ಯಕ್ಷರು ಪಾಕಿಸ್ತಾನ ಮತ್ತು ಭಾರತ ಪರಸ್ಪರರ ರಾಷ್ಟ್ರಗಳಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಬಾರಿ ಭಾರತಕ್ಕೆ ಬಂದು ಆಡಿ. ಸ್ವದೇಶಿ ಸರಣಿಯ ನಷ್ಟಕ್ಕೆ ನಾವು ಪರಿಹಾರ ನೀಡಲು ಸಿದ್ಧರಿದ್ದೇವೆ, ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಣೆಯಾದರೆ  ನಾವು ಅಲ್ಲಿಗೆ ತೆರಳಿ ಒಂದೆರಡು ಸರಣಿ ಆಡುತ್ತೇವೆ. ಅದನ್ನು ಅಹಂ ವಿಷಯವಾಗಿ ತೆಗೆದುಕೊಂಡು ದುಬೈನಲ್ಲೇ ಆಡಬೇಕೆಂದು ಒತ್ತಾಯಿಸುವುದು ಏಕೆ ಎಂದು ಪ್ರಶ್ನಿಸಿದರು. 

Share this Story:

Follow Webdunia kannada