Select Your Language

Notifications

webdunia
webdunia
webdunia
webdunia

ಪತ್ರಕರ್ತನಿಗೆ ಬಯ್ದ ಕೊಹ್ಲಿ ವರ್ತನೆಗೆ ಬಿಸಿಸಿಐ ಎಚ್ಚರಿಕೆ

ಪತ್ರಕರ್ತನಿಗೆ ಬಯ್ದ  ಕೊಹ್ಲಿ ವರ್ತನೆಗೆ ಬಿಸಿಸಿಐ ಎಚ್ಚರಿಕೆ
, ಗುರುವಾರ, 5 ಮಾರ್ಚ್ 2015 (19:04 IST)
ಭಾರತದ ಪತ್ರಕರ್ತರೊಬ್ಬರನ್ನು ದೂಷಿಸಿದ ಭಾರತದ ಖ್ಯಾತ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ ಕಟು ಎಚ್ಚರಿಕೆ ನೀಡಿದ್ದು, ತಂಡದ ಗೌರವವನ್ನು ಸರ್ವಕಾಲದಲ್ಲೂ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದರು.
 
ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಬಾರದೆಂದು ಅದು ಎಚ್ಚರಿಸಿದೆ. ಮಂಗಳವಾರ ನಡೆದ ತರಬೇತಿ ಶಿಬಿರದ ನಂತರ ತಮ್ಮ ಸಹನೆ ಕಳೆದುಕೊಂಡ ಕೊಹ್ಲಿ ಪತ್ರಕರ್ತರೊಬ್ಬರಿಗೆ ವಾಚಾಮಗೋಚರವಾಗಿ ನಿಂದಿಸಿದ್ದರು.
 
ಈ ಕುರಿತು ಆ ವರದಿಗಾರ ಕೆಲಸ ಮಾಡುವ ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದೆ. ಮಂಡಳಿಯ ಕಾರ್ಯದರ್ಶಿ ಅನುರಾಗ್ ಠಾಕುರ್ ಇದೊಂದು ತಪ್ಪು ಭಾವನೆಯಿಂದ ಉಂಟಾದ ಪ್ರಕರಣವೆಂದೂ ತಂಡ ವಿಶ್ವಕಪ್ ಮೇಲೆ ಗಮನಹರಿಸಲು ಈ ವಿಷಯವನ್ನು ಅಲ್ಲಿಗೇ ಬಿಡಬೇಕೆಂದು ಹೇಳಿದ ಬಳಿಕ ಬಿಸಿಸಿಐ ಎಚ್ಚರಿಕೆ ಹೊರಬಿದ್ದಿದೆ.
 

Share this Story:

Follow Webdunia kannada